• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯಲಕೊಟ್ಟಿಗೆ ಶಾಲಾ ಅಂಗಳದಲ್ಲಿ ಪುಟಾಣಿ ಅಂತರ್ಜಾಲ ಜಗತ್ತು ಅನಾವರಣಗೊಳಿಸಿದ ಶ್ರೀ ಹರೀಶ ಗಾಂವಕರ್

August 7, 2021 by Vishwanath Shetty Leave a Comment

ಹೊನ್ನಾವರದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾದ ದಿನ ಎಂದರೆ ಅತಿಶಯೋಕ್ತಿಯೇನಲ್ಲ. ಹೊನ್ನಾವರದಿಂದ 35 ಕಿಲೋ ಮೀಟರ್ ದೂರವಿರುವ ದಟ್ಟ ಕಾಡಿನ ನಡುವೆ ಸುಮಾರು 40 ಬಡ-ಮಧ್ಯಮ ಆರ್ಥಿಕ ಹಿನ್ನೆಲೆ ಹೊಂದಿದ ಕುಟುಂಬಗಳನ್ನು ಹೊಂದಿರುವಂತ ಕುಗ್ರಾಮ ಎಲ್ಲ ಕೊಟ್ಟಿಗೆ. ಇಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಇದೆ. ಕೋವಿಡ್ 19 ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆಯಿಸಲಾಗದ ಸ್ಥಿತಿಯಲ್ಲಿ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ದೂರದೃಷ್ಟಿಯಿಂದ, ತಮ್ಮ ಶಾಲಾ ಶಿಕ್ಷಕರ ಮಾರ್ಗದರ್ಶನ ಹಾಗೂ ಸಲಹೆ ಮೇರೆಗೆ, ಸುಮಾರು ಎಂಟು ಕಿಲೋಮೀಟರ್ನಷ್ಟು ದೂರದಿಂದ ಶ್ರಮದಾನದ ಮೂಲಕ ಕಾಡಿನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಎಳೆದುತಂದು ಶಾಲೆಗೆ ಮತ್ತು ಮನೆಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಿ ಪ್ರತಿಯೊಂದು ಮಗು ಟೀಚ್ ಮಿಂಟ್ ಆಫ್ ಮೂಲಕ ಆನ್ಲೈನ್ ತರಗತಿ ಸೌಲಭ್ಯ ಪಡೆಯುವಂತೆ ಮಾಡಿದು ಒಂದು ಅದ್ಭುತ ಅವಿಸ್ಮರಣೀಯ ಸಾಧನೆ.


ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆಯಲ್ಲಿ ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಜನ್ಮತಾಳಿದ ಅಂತರ್ಜಾಲದ ಮೂಲಕ ಶಿಕ್ಷಣ ನೀಡಲು ಸಹಕಾರಿಯಾದ ಆನ್‍ಲೈನ ತರಗತಿಯನ್ನು ಉಪನಿರ್ದೇಶಕರು(ಆಡಳಿತ) ಆದ ಶ್ರೀ ಹರೀಶ ಗಾಂವಕರ್ ಇವರು Teachmint app ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ನೀವು ಮಾಡಿದ ಕಾರ್ಯ ಅಧಿಕಾರಿಗಳಾಗಿ ನಮ್ಮಿಂದ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ವೃತ್ತಿ ಜೀವನ ಅದಿಸ್ಮರಣೀಯ ಕಾರ್ಯಕ್ರಮ ಇಲ್ಲಿ ಗ್ರಾಮಸ್ಥರ ಹೃದಯ ವೈಶಾಲ್ಲತೆ, ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರರುಣಿ ಇಲ್ಲಿಯ ಜನರು ಮತ್ತು ಶಿಕ್ಷಕರು ಸೇರಿ ಅತ್ಯಂತ ಎಲ್ಲರಿಗೂ ಮಾದರಿ ಯಾದ ಕೆಲಸವನ್ನು ಮಾಡಿದ್ದೀರಿ. ಇಲ್ಲಿಯ ಶಿಕ್ಷಕರು ಇಲ್ಲಿ ಕೆಲಸ ಮಾಡುವ ಶಿಕ್ಷಕರು ನಿಜಕ್ಕೂ ಪ್ರಶಸ್ತಿಗೆ ಯೋಗ್ಯರು. ನಮ್ಮ ಇಲಾಖೆ ಇಲ್ಲಿನ ಗ್ರಾಮಸ್ಥರ ಕೆಲಸವನ್ನು ಸದಾ ಸ್ಮರೀಸುತ್ತದೆ.

  • MG Naik Photo 06 08 2021 1 1
  • MG Naik Photo 06 08 2021

ಇದು ಒಂದು ರಾಜ್ಯದಲ್ಲೇ ಪ್ರಥಮ ಕಾರ್ಯ ಎಂದು ಹೇಳಿದರು. ನಂತರ ಸಭಾ ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಈಶ್ವರ ನಾಯ್ಕ ಉಪನಿರ್ದೇಶಕರು(ಅಭಿವೃದ್ಧಿ) ಇವರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ ಅವರು ನೀವು ಮಾಡಿದ ಪ್ರಯತ್ನ ನಮ್ಮ ರಾಜ್ಯಕ್ಕೆ ಮಾದರಿ ಜೊತೆಗೆ ನಿಮ್ಮ ಗ್ರಾಮದ ಕೀರ್ತಿ ಎಲ್ಲ ಕಡೆ ಪ್ರಚಾರವಾಗಲಿ ಎಂದು ನುಡಿದರು. ನಂತರ ಮಾತನಾಡಿದ ಶ್ರೀ ಶ್ರೀಕಾಂತ ಹೆಗಡೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಕಾರವರು ಇವರು ನೀವು ಮಾಡಿದ ಕಾರ್ಯ ಎಲ್ಲರೂ ಅನುಕರಣೆ ಮಾಡುವಂತಾಗಲಿ ಎಂದು ನುಡಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ||ಸವಿತಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊನ್ನಾವರ ಇವರು ಮಾತನಾಡಿ ಶಿಕ್ಷಣಕ್ಕಾಗಿ ಪಾಲಕರು ಮಾಡಿದ ತ್ಯಾಗ ಅವಿಸರಣೀಯ ಎಂದು ನುಡಿದರು. ಶ್ರೀಮತಿ ಮಾದೇವಿ ಉಪ್ಪಾರ ಗ್ರಾ.ಪಂ.ಅಧ್ಯಕ್ಷರು ಉಪ್ಪೋಣಿ ಅಧ್ಯಕತೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಎಸ್ ಎಂ ಹೆಗಡೆ ಸಮನ್ವಯಾಧಿಕಾರಿಗಳು, ಶ್ರೀ ಜಿ. ಎಚ್. ನಾಯ್ಕ ದೈಹಿಕ ಪರಿವೀಕ್ಷಕರು ಮಂಜುನಾಥ ಗೌಡ ಗ್ರಾ.ಪಂ.ಸದಸ್ಯರು, ಶ್ರೀ ಮಹೇಶ ಆಚಾರ್ಯ, ಪಂಚಾಯತ ಕಾರ್ಯದರ್ಶಿ ಶ್ರೀ ಎಂ.ಜಿ.ನಾಯ್ಕ ಅಧ್ಯಕ್ಷರು ಪ್ರಾ.ಶಾ.ಶಿ. ಸಂಘ ಹೊನ್ನಾವರ ಶ್ರೀ ಸುದೀಶ ನಾಯ, ಜಿಲ್ಲಾ ಗೌರವಾಧ್ಯಕ್ಷರು, ಪ್ರಾಂಶಾ.ಶಿ ಸಂಘ ಉತ್ತರ ಕನ್ನಡ ಶ್ರೀ ಪ್ರಮೋದ ನಾಯ್ಕ, ಇಕೋ ಹೊನ್ನಾವರ, ಶ್ರೀ ಸತೀಶ ನಾಯ್ಕ, ಬಿ.ಆರ್.ಡಿ ಹೊನ್ನಾವರ ಶ್ರೀ ಸುಭಾಸ ನಾಯ್ಕ ಸಿ.ಆರ್.ಪಿ ಉಪ್ಪೋಣಿ, ಶ್ರೀ ಗೌಡ ಅಧ್ಯಕ್ಷರು ಎಸ್.ಡಿ.ಎಮ್.ಸಿ ಉಪಸ್ಥಿತರಿದ್ದರು.

ಪ್ರ.ಮು.ಶಿರಾದ ಶ್ರೀ ಸುಬ್ರಾಯ ಎನ್ ಶಾನಭಾಗ, ಪ್ರಾಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣ ಮಾಡಿದರು. ಶ್ರೀಮತಿ ಶೋಭಾ ಶಾನಭಾಗ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲೆಗೆ ಶ್ರೀ ಮಾರುತಿ ಗುರೂಜಿ ಶ್ರೀಕ್ಷೇತ್ರ ಬಂಗಾರಮಕ್ಕಿ ಇವರು ಶಾಲೆಗೆ ಅತಿ ಅವಶ್ಯವಿರುವ ಒಂದು ಲ್ಯಾಪ್ ಟಾಪ್ ದೇಣಿಗೆಯಾಗಿ ನೀಡಿದರು ಅಷ್ಟೇ ಅಲ್ಲದೆ ಪೂರ್ವ ವಿದ್ಯಾರ್ಥಿಗಳು ಗ್ರಾಮಸ್ಥರು ಶಾಲೆಗೆ ಅವಶ್ಯಕವಿರುವ ಅನೇಕ ಸಾಮಗ್ರಿಗಳನ್ನು ವಸ್ತುರೂಪದಲ್ಲಿ ದೇಣಿಗೆ ನೀಡಿದರು.


“ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು Teachmint app ಮೂಲಕ ಪ್ರಾರ್ಥನೆ ಮತ್ತು ಸ್ವಾಗತ ಹಾಡನ್ನು ಹಾಡಿದ್ದು ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಶಾಲಾ ಮಕ್ಕಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿಲ್ಲದ ಕಾರಣ ಎಲ್ಲಾ ಮಕ್ಕಳು ಆನ್‍ಲೈನ್‍ನಲ್ಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Teachmint app, ಕಾಡಿನಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಎಳೆದುತಂದು ಶಾಲೆಗೆ, ಮಕ್ಕಳನ್ನು ಶಾಲೆಗೆ ಕರೆಯಿಸಲಾಗದ ಸ್ಥಿತಿ, ಮನೆಗಳಿಗೆ, ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಕಲ್ಪಿಸಿ ಪ್ರತಿಯೊಂದು ಮಗು

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...