ತಾಲಿಬಾನ್ ಉಗ್ರರ ಬಿಡುಗಡೆ ಮಾಡಿರುವ ಚಿತ್ರ ಎಂಐ -24 ವಿ ಹೆಲಿಕಾಪ್ಟರ್ನ ರೋಟರ್ಗಳನ್ನು ಬಿಚ್ಚಿಟ್ಟಿರುವುದು ಈ ಚಿತ್ರದಲ್ಲಿ ಕಾಣುತ್ತದೆ. ಜೋಸೆಫ್ ಡೆಂಪ್ಲಿ ಈ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ
ನವಹೆಗಲಿ : ಅಫ್ಗಾನಿಸ್ತಾನಕ್ಕೆ ಭಾರತ ಸರ್ಕಾರವು 2019ರಲ್ಲಿ ಉಡುಗೊರೆಯಾಗಿ ನೀಡಿದ್ದ ಎಂಬ -24ವಿ ಕದನ ಹೆಲಿಕಾಪ್ಟರ್ ಈಗ ತಾಲಿಬಾನ್ ಉಗ್ರರ್ ವಶವಾಗಿದೆ. ಉತ್ತರ ಅಫ್ಗಾನಿಸ್ತಾನದ ಕುಂದುಜ್ ವಿಮಾನ ನಿಲ್ದಾಣವನ್ನು ತಾಲಿಬಾನ್ ಉಗ್ರರ ಬುಧುವಾರ ವಶಕ್ಕೆ ಪಡೆದುಕೊಂಡಿದ್ದು. ಅಲ್ಲಿದ್ದ ಹೆಲಿಕಾಪ್ಟರ್ ಅನ್ನೂ ಅವರು ವಶಕ್ಕೆ ಪಡೆದಿದ್ದಾರೆ.
ಭಾರತ ಸರ್ಕಾರದ 2019ರಲ್ಲಿ ಅಫ್ಗಾನಿಸ್ತಾನ ವಾಯುಪಡೆಗೆ ನಾಲ್ಕು ಎಂಐ-24ವಿ ಹೆಲಿಕಾಪ್ಟರ್ಗಳನ್ನು ಉಡುಗೊರೆಯಾಗಿ ನೀಡಿತ್ತು. 2015 ಮತ್ತು 2016ರಲ್ಲಿ ನೀಡಿದ್ದ ಕದನ ಹೆಲಿಕಾಪ್ಟರ್ಗಳ ಬದಲಿಗೆ ನಾಲ್ಕು ಎಂಐ-24ವಿ ಹೆಲಿಕ್ಟಾರ್ಗಳ ಬದಲಿಗೆ ನಾಲ್ಕು ಎಂಐ-24ವಿ ಹೆಲಿಕಾಪ್ಟರ್ಗಳನ್ನು ನೀಡಿತ್ತು. ನಾಲ್ಕರಲ್ಲಿ ಒಂದು ಹೆಲಿಕಾಪ್ಟರ್ ಈಗ ತಾಲಿಬಾನ್ ಉಗ್ರರ ವಶವಾಗಿದೆ.
2019 ರಲ್ಲಿ ಅಫ್ಗಾನಿಸ್ತಾನಕ್ಕೆ ಭಾರತ ಉಡುಗೊರೆ ನೀಡಿದ್ದ ಹೆಲಿಕ್ಟಾರ್
ನಾಲ್ಕು ಹೆಲಿಕಾಪ್ಟರ್ಗಳಲ್ಲಿ ಒಂದು ತಾಲಿಬಾನ್ ಉಗ್ರರ ವಶಕ್ಕೆ
ಉಗ್ರರ ವಿರುದ್ಧ ದಾಳಿ ನಡೆಸಲು ಈ ಹೆಲಿಕಾಪ್ಟರ್ ಬಳಸಲಾಗಿತ್ತು

ತಾಲಿಬಾನ್ ಉಗ್ರರು ಭಾನುವಾರ ಕುಂದುಜ್ ರಾಜಧಾನಿ ಪ್ರದೇಶವನ್ನು ವಶಕ್ಕೆ ಪಡೆದಿದ್ದರು. ಉಗ್ರರ ವಿರುದ್ಧ ಸೈನೀಕರು ಹೋರಾಡಿದ್ದರು. ಬುಧವಾರ ಮಧ್ಯಾಹ್ನದ ವೇಳೆಗೆ ಇಡೀ ನಗರವನ್ನು ಉಗ್ರರ ವಶಕ್ಕೆ ಪಡೆದರು. ವಿಮಾನ ನಿಲ್ದಾಣದಲ್ಲಿದ್ದ ಸೈನಿಕರು ಉಗ್ರರಿಗೆ ಶರಣಾಗಿದ್ದಾರೆ. ನಂತರ ತಮ್ಮ ಶಸ್ತಾçಸ್ತç. ಸೇನಾ ವಾಹನಗಳು ಮತ್ತು ಸಲಕರಣಿಗಳು ಉಗ್ರರ ವಶಕ್ಕೆ ನೀಡಿದ್ದಾರೆ. ನಂತರ ಅಲ್ಲಿಂದ ತೆರಳಿದ್ದಾರೆ.
ಉಗ್ರರ ವಿಮಾನ ನಿಲ್ದಾಣವನ್ನು ವಶಕ್ಕ ಪಡೆಯುವ ವಿಡಿಯೊವನ್ನು ಇಂಟಿರ್ನ್ಯಾಷನಲ್ ಇನ್ಸ್ವಿಟ್ಯೂಟ್ ಫಾರ್ ಸ್ಟಾçಟಿಜಿಕ್ ಸ್ವಡೀಸ್ನ ಜೋಸೆಫ್ ಡೆಂಪ್ರಿ ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಆ ವಿಡಿಯೋದಲ್ಲಿ ಎಂಐ-24ವಿ ಹೆಲಿಕಾಪ್ಟರ್ನ ದೃಶ್ಯವೂ ಇದೆ. ಹೆಲಿಕಾಪ್ಟರ್ನ ಚಿತ್ರವೂ ಇದೆ. ಹೆಲಿಕಾಪ್ಟರ್ ರೋಟರ್ಗಳನ್ನು ಬಿಚ್ಚಿಡಲಾಗಿದೆ. ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸಲು ಬರದೇ ಇರುವ ಕಾರಣ ಉಗ್ರರ ಅದರ ಬಿಡಿಬಾಗಗಳನ್ನು ಬಿಚ್ಚಿಟ್ಟರಬಾರದು ಎಂದು ಡೆಂಪ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಕುಂದುಜ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಾಗ ಯಾವೆಲ್ಲಾ ವಸ್ತುಗಳು ದೊರೆತವು ಎಂಬುದರ ಬಗ್ಗೆ ತಾಲಿಬಾನ್ ಮಾಹಿತಿ ನೀಡಿದೆ. ಶಸ್ತಾçಸ್ತç ಸೇನಾ ಸಲಕರಣೆಗಳು ಮತ್ತು ವಾಹನಗಳ ಮಾಹಿತಿಯನ್ನು ತಾಲಿಬಾನ್ ಉಗ್ರರ ನೀಡಿದ್ದಾರೆ. ಭಾರತವು ಉಡುಗೊರೆಯಾಗಿ ನೀಡಿದ್ದ ಎಂಐ-24 ವಿ ಹೆಲಿಕಾಪ್ಟರ್ನ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೆಲಿಕಾಪ್ಟರ್ ನ ಚಿತ್ರವನ್ನು ಬಿಡುಗಡೆ ಮಾಡಿದ್ದಾನೆ. ತಾಲಿಬಾನಿಗಳ ಬಂಕರ್ ಮೇಲೆ ಜುಲೈ 31 ರಂದು ದಾಳಿ ನಡೆಸಲು ಅಪ್ಲನ್ ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ಬಳಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ ಅಫ್ಗಾನಿಸ್ತಾನದ ವಿವಿಧಡೆ ಸೇವೆಯಲ್ಲಿದ್ದ 50 ಭಾರತೀಯ ಅಧಿಕಾರಿಗಳು ಮತ್ತು ನಾಗರಿಕರನ್ನು ಭಾರತ ಸರ್ಕಾರವು ಬುಧುವಾರ ಸುರಕ್ಷಿತವಾಗಿ ತೆರವು ಮಾಡಿದೆ.
ವಿಶೇಷ ವಮಾನದ ಮೂಲಕ ಅವರನ್ನು ಬುಧುವಾರ ಬೆಳಗಿನ ಜಾವ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಗಿದೆ.
Leave a Comment