ಕಾರವಾರ : ಭಟ್ಕಳ ತಾಲೂಕಿನ ಮುಖ್ಯ ಅಂಚೆ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಆಧಾರ್ ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಕಚೇರಿಯಲ್ಲಿ ಪ್ರತ್ಯೇಕ ಎರಡು ಆಧಾರ್ ಕೌಂಟರ್ಗಳನ್ನು ಪ್ರರಂಭಿಸಲಾಗಿದೆ.
ಆಧಾರ್ ನೋಂದಣದಾರರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ ಇನ್ನೋಂದು ಕೌಂಟರ್ ತೆರೆಯಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಲು ಅಂಚೆ ಕಚೇರಿಗೆ ಹೋಗುವ ಬದಲು. ಮನೆಗೆ ಬರುವ ಪೋಸ್ಟ್ ಮ್ಯಾನ ಸಿಇಎಲ್ಸಿ ಮೂಲಕ ನೀಡುವ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಾರವಾರ ಅಂಚೆ ಸಧೀಕ್ಷಕರ ವಿಭಾಗವು ಪ್ರಕಡಣೆಯಲ್ಲಿ ತಿಳಿಸಿದೆ.
Leave a Comment