ಮುಂಡಗೋಡ : ಪತ್ನಿ ಮೇಲೆ ಮಾರಣಾತಿಂಕ ಹಲ್ಲೆ ನಡೆಸಿದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಡನೆ ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಂಗಾಧರ ಚಾಧವ ಎಂಬಾತನೇ ಆತ್ಮ ಹತ್ಯೆ ಮಡಿಕೊಂಡವ. ಪತಿಯಿಂದ ಗಂಭಿರ ಹಲ್ಲೆಗೊಳಗಾದ ಪತ್ನಿ ಸಾವು ಬದುಕಿಗೆ ನಡುವೆ ಹೋರಾಡುತ್ತಿದ್ದಾಳೆ.
ಮನೆಯಲ್ಲಿ ಮಧ್ಯಾಹ್ನ ಪತಿ ಮತ್ತು ಪತ್ನಿ ನಡುವೆ ಜಗಳ ನಡೆದಿದೆ. ಸಿಟ್ಟಿಗೆದ್ದ ಪತಿಯ ಪತ್ನಿಯ ಮೇಲೆ ತೀವ್ರ ಹಲ್ಲೆ ಮಾಡಿದ್ದಾನೆ. ತೀವ್ರಗಾಯಗೊಂಡ ಪತ್ನಿಯನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಆರೋಪಿ ಗಂಗಾಧರ ಹೆದರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment