ವರಮಹಾಲಕ್ಷಿö್ಮ ಹಬ್ಬದ ದಿನದಂದೇ ಹಾಡಹಗಲೇ ದುಷ್ಕರ್ಮಿಗಳು ವೃದ್ಧ ದಂಪತಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಡನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಕಾಶಿನಗರದಲ್ಲಿ ಜರುಗಿದೆ. ಶಾಂತರಾಜು (65) ಪ್ರೇ ಮಲತಾ (62) ಹತ್ಯೆ ಗೀಡಾದ ದಂಪತಿ. ಹಂತಕರು ಶಾಂತರಾಜುನನ್ನು ಚಾಕುವಿನಿಂದ ಚುಚ್ಚಿ, ದಿಂಬಿನಿAದ ಉಸಿರುಗಟ್ಟಿ ಸಾಯಿಸಿದ್ದರೆ, ಮತ್ತೊಂದು ಕೊಠಡಿಯಲ್ಲಿ ಪ್ರೇಮಲತಾನನು ಕೇಬಲ್ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕೇಬಲ್ ವೈರ್ ಪತ್ತೆಯಾಗಿದೆ.

ಈ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ಶಾಂತರಾಜು ಮತ್ತು ಪ್ರೇಮಲತಾ ಇಬ್ಬರೇ ಮನೆಯಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದರು. ಆದರೆ ಮನೆಯಲ್ಲಿದ್ದ ಚಿನ್ನಾಭರಣ ಹಗೂ ಹಣ ದೋಚುವ ಸಲುವಗಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆ ನಡೆಯುವ ಮನ್ನ ಮನೆಗೆ ಮೂರು ಜನ ಒಂದು ಟೀ ಕುಡಿದು ಹೋಗಿರುವ ಸಾಕ್ಷಾö್ಯ ಗಳು ಮನೆಯಲ್ಲಿ ದೊರೆತಿದ್ದು ಪೊಲೀಸರು ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ. ಕೊಲೆಗೀಡಾಗಿರುವ ಶಾಂತರಾಮ ಬಿಎಂಟಿಸಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಎಂದು ತಿಳಿದು ಬಂದಿದೆ. ನಗರ ಪೊಲೀಸ್ ಆಯುಕ್ತ ಕಮಲ್ಪಂತ್, ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮರಾದ ದೈಶ್ಯವಳಿಯ ಮೂಲಕ ಪರಶೀಲನೆ ನಡೆಸುತ್ತಿದ್ದಾರೆ. ವಿಶೇಷ ತಂಡ ರಚನೆ : ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಗಳ ಪತ್ತಗೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಶೀಘ್ರದಲ್ಲಿ ಹಂತಕರನ್ನು ಬಂಧಿಸಲಾಗುವುದು ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave a Comment