ದಾವಣಗೆರೆ : ಬೆಸ್ಕಾಂನಲ್ಲಿ ಉದ್ಯೋಗ ಪಡೆಯುವ ಉದ್ದೇಶದಿಂದ ಇಬ್ಬರು ಅಭ್ಯರ್ಥಿಗಳೂ ನಕಲಿ ಅಂಕಪಟ್ಟಿ ಸೃಷ್ಟಿಸಿ ವಾಮಮಾರ್ಗದಲ್ಲಿ ಉದ್ಯೋಗ ಗಿಟ್ಟಸಿಕೊಂಡು ಮೋಸ ಮಾಡಿರುವ ಘಟನೆ ನಡೆದಿದೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಲಾಳೇಮಶಾಕ್ ನಾಯ್ಕೊಡಿ, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದ ಹುಸೇನ್ ಸಾ ಸರಸುಣಗಿ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಖಲಾಗಿದೆ.
ಕಳೆದ ಫೆ. 10 2015 ರಂದು ಬೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಮಾರ್ಗದಾಳು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಲ್ಲಿ 53 ಅಭ್ಯರ್ಥಿಗಳಿಗೆ ದಾವಣಗೆರೆ ವಿಭಾಗಕ್ಕೆ ನೇಮಕಾತಿ ಆದೇಶ ನೀಡಲಾಗಿತ್ತು. ನಂತರ ಈ ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಮಾನದಂಡವಾದ ಐಟಿಐ ಅಂಕಪಟ್ಟಿ ಪ್ರಮಾಣ ಪತ್ರ ಸೇರಿದಂತೆ ಇನ್ನಿತರ ದಾಖೆಗಳ ನೈಜತೆಯ ಪರಿಶೀಲನೆಗಾಗಿ ಫೆಬ್ರವರಿ 25, 2017ರಂದು ಕಳುಹಿಸಲಾಗಿತ್ತು. ಅವುಗಳ ಪರಿಶೀಲನೆ ಸಂದರ್ಭದಲ್ಲಿ ಲಾಳೇಮಶಾಕ್ ನಾಯ್ಕೊಡಿ, ಹುಸೇನ್ ಸಾ ಸರಸುಣಗಿ ಎಂಬ ಅಭ್ಯರ್ಥಿಗಳಿಬ್ಬರ ಅಂಕ ಪಟ್ಟಿ ನೈಜವಾಗಿವೆಂಬ ಸ್ಟಷ್ಟೀಕರಣ ನೀಡಲಾಗಿದೆ.
ಈ ಇಬ್ಬರ ಅಭ್ಯರ್ಥಿಗಳು ವಂಚಿಸಿರುವುದಾಗಿ ದಾವಣಗೆರೆಯ ಬೆಸ್ಕಾಂನ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್, ನೇಮಕಾತಿ ಪ್ರಾಧಿಕಾರಿಯೂ ಆದ ಎಸ್. ಕೆ. ಪಟೇಲ್ ದೂರು ನೀಡಿದ್ದಾರೆ.
Leave a Comment