ಕುಮಟಾ : ಕಡತೋಕಾದ ಸ್ವಯಂಭ ದೇವ ಸೇವಾ ಸಮಿತಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜೊತೆಗೆ ಕೆಕ್ಕಾರ ಪಾಠಶಾಲೆಯ ನಿವೃತ್ತ ಶಿಕ್ಷಕ ವಿದ್ವಾನ್ ರಾಮಚಂದ್ರ ಭಟ್ಟ ಅವರಿಗೆ ಸಮ್ಮಾನ ಮತ್ತು ತಳಮದ್ದಳೆ ಕಾರ್ಯಕ್ರಮವೂ ನಡೆಯಿತು.

ಸ್ವಯಂಭು ಯಕ್ಷಗಾನ ಮಂಡಳಿ ಹಾಗೂ ಕಲಿಕಾ ಕೇಂದ್ರ ಕಡತೋಕಾ ಆಶ್ರಯದಲ್ಲಿ, ದೇವಾಲಯ ಸೇವಾ ಸಮಿತಿ ಮಂಡಳಿಯ ಸಹಯೋಗದೊಂದಿಗೆ ಕೋವಿಟ್ ನಿಯಮಾವಳಿಯಂತೆ ಸೀಮಿತ ಜನರನ್ನೊಳಗೊಂಡ ಕಾರ್ಯಕ್ರಮ ಇದಾಗಿತ್ತು.ಎಸ್. ಶಂಭು ಭಟ್ಟ ಅವರ ಅಧ್ಯಕ್ಷತೆಯಲ್ಲಿ ಸಮ್ಮಾನ ಕಾರ್ಯಕ್ರಮ ನೆರವೇರಿತು. ನಂತರ ಬಡಗುತಿಟ್ಟಿನ ಮೊದಲ ಮಹಿಳಾ ಭಾಗವತೆಯಾದ ಚಿಂತನಾ ಉದಯ ಹೆಗಡೆ ಮಾಳಕೋಡ್ ಅವರ ಕಂಟಸಿರಿಯಲ್ಲಿ ತಾಳೆಮದ್ದಳೆ ಸಂಪನ್ನಗೊAಡಿತು. ಅರ್ಥಧಾರಿಗಳಾಗಿ ಈಶ್ವರ ಭಟ್ಟ ಪ್ರಭಾಕರ ಚಿಟ್ಟಾಣಿ, ಆನಂದ ಭಟ್ಟ ಕೆಕ್ಕಾರ ರಾಮಚಂದ್ರ ಗಣೇಶಭಟ್ಟ ಭಾಗವಹಿಸಿದ್ದರು.
Leave a Comment