ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಪಂಜಾಯಿತಿ ಹಲಸಬಾಳು ಗ್ರಾಮದ ಕುಮಾರಗಿರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಎಚ್.ಆರ್.ಪಾಡುರಂಗ, ದಾನಶಾಸನ ಹಾಗೂ ಮತ್ತೊಂದು ವೀರಗಲ್ಲು ಶಾಸನ ಶೋಧನೆ ಮಾಡಿದ್ದಾರೆ. ಹದಿನಾಲ್ಕನೇ ಶತಮಾನದ ಹೊಯ್ಸಳರ ಅಂತ್ಯಕಾಲ ಹಾಗೂ ವಿಜಯನಗರದ ಆರಂಭ ಕಾಲದ ಅಪ್ರಕಟಿತ ದಾನಶಾಸನ ಹಾಗೂ ಹದಿನಾರನೇ ಶತಮಾನದ ಅಂತ್ಯಕಾಲದ ವೀರಗಲ್ಲು ಶಾಸನ ಹೀಗೆ ಎರಡು ಅಪ್ರಕಟಿತ ಶಿಲಾಶಾಸನ ಸಂಶೋಧಿಸಿ ಐತಿಹಾಸಿಕ ತಳಿಗೆನಾಡು ಸಾವಿರದ-ಹೊರವಲೆನಾಡಿನ ಬೆಂಡುಗ ಸೀಮೆಯ ಇತಿಹಾಸದ ಮೇಲೆ ಹೊಸಬೆಳಕು ಚಲ್ಲಿದ್ದಾರೆ.
ಬಳಪದ ಕಲ್ಲಿನ (ಶಿರೋಭಾಗತುಂಡಾದ) ಮೊದಲನೇ ಸ್ತಂಭಶಾಸನ 3.33 ಅಡಿ ಎತ್ತರ 8 ಇಂಚು ಅಗಲ 6ಇಂಚು ದಪ್ಪವಿದ್ದು, ಮುಂಭಾಗ ದಲ್ಲಿ 12 ಸಾಲು ಬಲಭಾಗದಲ್ಲಿ 17 ಸಾಲು ಹಿಂಭಾಗದಲ್ಲಿ 17 ಸಾಲು ಹೀಗೆ ಮೂರು ಕಡೆ ಒಟ್ಟು 46 ಸಾಲಿನ ಹೊಯ್ಸಳರ ಕಾಲದ ಲಿಪಿ ಸಾದೃಶ್ಯದ ಹಳೆಗನ್ನಡ ಶಾಸನ ಪತ್ತೆಯಾಗಿದೆ.
ಈ ಎರಡು ಅಪ್ರಕಟಿತ ಶಾಸನಗಳ ಕುರಿತು ಸಂಶೋಧಕ ಪಾಡುರಂಗ ಹೆಚ್ಚಿನ ಅಧ್ಯಯನ ನಡೆಸಿದ್ದು, ಮಾರ್ಗದರ್ಶನ ನೀಡುತ್ತಿರುವ ಶಾಸನ ತಜ್ಞ ಎಚ್. ಎಂ ನಾಗರಾಜರಾವ್-ಮೈಸೂರು ಅವರಿಗೂ ಶಾಸನಗಳ ಶೋಧನೆಯ ಕ್ಷೇತ್ರ ಕಾರ್ಯದಲ್ಲಿ ಅರ್ಚಕರಾದ ಕಂದಸ್ವಾಮಿ ಹಾಗೂ ರಾಜು ಮತ್ತು ಎಚ್.ಪಿ.ಶ್ರೀನಿವಾಸ,ಎಚ್.ಕೆ.ಮಯೂರ್ ಸಹಕಾರದಲ್ಲಿ ಅಧ್ಯಯನ ಮಾಡಲಾಗಿದೆ.
Leave a Comment