ಅಂಕೋಲಾ : ಗದ್ದೆಯಲ್ಲಿ ಕೃಷಿ ಕೆಲಸ ಮುಗಿಸಿ ವಾಪಸಾಗುತ್ತಿದ್ದ ವೇಳೆ ಯುವತಿಯೊಬ್ಬಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ತಾಲೂಕಿನ ಬಾಳೆಗುಳಿಯಲ್ಲಿ ನಡೆದಿದೆ.
ಅಕ್ಷತಾ ತಮ್ಮಾಣಿ ಗೌಡ (17) ಮೃತ ಯುವತಿ ಮೂಲತಃ ಅಗಸೂರಿನವಳಾಗಿದ್ದು ಬಾಳೆಗುಳಿಯ ಅಜ್ಜಿಯ ಮನೆಯಲ್ಲಿ ಇರುತ್ತಿದ್ದಳು. ಸೋಮವಾರ ಅಣ್ಣನ ಜೊತೆ ಗದ್ದೆ ಕೆಲಸಕ್ಕೆ ಹೊಗಿದ್ದಳು.
ಗದ್ದೆ ಕೆಲಸವನ್ನು ಮುಗಿಸಿಕೊಂಡು ಅಣ್ಣ ಗದ್ದೆಯಲ್ಲಿರುವ ನೆಲ ಸಮತಟ್ಟಾದ ಬಾವಿಯಿಂದ ನೀರು ತೆಗೆದುಕೊಂಡು ಮನೆಗೆ ಹೋಗು ಎಂದಿದ್ದಾನೆ.
ಹಾಗೆಯೆ ತಂಗಿಯ ಬಾವಿ ನೀರು ತೆಗೆಯಲು ಹೋದ ಸಂದರ್ಭದಲ್ಲಿ ಬಾವಿಗೆ ಆಯತಪ್ಪಿ ಬಿದ್ದಿದ್ದಾಳೆ. ನಂತರ ಮನೆಗೆ ಹೋದ ಅಣ್ಣ ತಂಗಿ ಬಾರದಿರುವುದನ್ನು ಕಂಡು ಕಿರಿಚಿಕೊಂಡಿದ್ದಾನೆ.
ಅಕ್ಕಪಕ್ಕದ ಮನೆಯವರು ಸ್ಥಳಕ್ಕಾಗಮಿಸಿ ಅಕ್ಷತಾಳನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೂಡಿಸಿದರಾದರೂ ಅಷ್ಟೊತ್ತಿಗಾಗಲೇ ಅಕ್ಷತಾ ಮೃತ ಪಟ್ಟಿದ್ದಳು. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment