• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ;6 ಜನರ ಮೇಲೆ ಪ್ರಕರಣ ದಾಖಲು

September 2, 2021 by Vishwanath Shetty Leave a Comment

ಹೊನ್ನಾವರ :ತಾಲೂಕಿನ ಮುಟ್ಟಾ ಗ್ರಾಮದ ಸರ್ವೇ ನಂ: 69/ಬ ಸ್ಥಳದಲ್ಲಿ  ನವಗ್ರಾಮ ಆಶ್ರಯ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮಂಜೂರಾದ ನಿವೇಶನದಲ್ಲಿ ಅನಧಿಕೃತವಾಗಿ ಇಟ್ಟಿದ್ದ ಗೂಡಂಗಡಿ ತೆರವು ಮಾಡಲು ಹೋಗಿದ್ದಾಗ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಭದ ೬ ಜನರ ಮೇಲೆ ಪ್ರಕರಣ ದಾಖಲಾಗಿದೆ.

ಹಾಡಗೇರಿಯಲ್ಲಿ ಮಾರುತಿ ಸುಬ್ರಾಯ ನಾಯ್ಕ ಎನ್ನುವವರು ಅನಧಿಕೃತವಾಗಿ ಬೇರೆಯವರಿಗೆ ಸರ್ಕಾರದಿಂದ ಮಂಜುರಾದ ಫಲಾನುಭವಿಗೆ ಮೋಸ ಮಾಡಿ ಗೂಡಂಗಡಿ ಇಟ್ಟಿದ್ದರು. ಹಲವು ಬಾರಿ ಸ್ಥಳಿಯ ಗ್ರಾಮ ಪಂಚಾಯತಿಗೆ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ.

  • IMG 20210901 WA0053
  • IMG 20210901 WA0054
  • IMG 20210901 WA0035

ಈ ಬಗ್ಗೆ ಕರವೇ ಗಜಸೇನೆ ತಹಶೀಲ್ದಾರರಿಗೆ ಮನವಿ ನೀಡಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಈ ಹಿಂದೆಯೇ ಸರ್ವೆ ಕಾರ್ಯ ನಡೆಸಿ ನೊಟಿಸ್ ನೀಡಿದ್ದರು, ಅಂಗಡಿ ತೆರವು ಮಾಡಿರಲಿಲ್ಲ. ಪೋಲಿಸ್ ಬಂದವಸ್ತ್ ನಡುವೆ ತಹಶೀಲ್ದಾರ. ನಾಗರಾಜ ನಾಯ್ಕಡ್, ಸಿಪಿಐ ಶ್ರೀಧರ ಎಸ್.ಆರ್, ಹಾಗೂ ಕಂದಾಯ ಇಲಾಖೆ ಪಂಚಾಯತ ರಾಜ್ ಸಿಬ್ಬಂದಿಗಳು ತೆರಳಿ ತೆರವು ಮಾಡುತ್ತಿರುವಾಗ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರರು ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ಗ್ರಾಮದಮಾರುತಿ  ಸುಬ್ರಾಯ ನಾಯ್ಕ, . ಶಂಕರ ಸುಬ್ರಾಯ ನಾಯ್ಕ,. ರವಿ ಮಾದೇವ ನಾಯ್ಕ,  ನಿತ್ಯಾನಂದ ಈಶ್ವರ ನಾಯ್ಕ, ದಯಾನಂದ  ಮಂಜುನಾಥ ನಾಯ್ಕ, ಸುಬ್ರಾಯ  ತಿಮ್ಮಪ್ಪ ನಾಯ್ಕ ಇವರ ಮೇಲೆ ಪ್ರಕರಣ ದಾಖಲಿಸಿದ್ದರು.

ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವುದಾಗಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು., ತಾಲೂಕಾಡಳಿತದಿಂದ ಅನಧೀಕೃತ ಗೂಡಂಗಡಿಯನ್ನು ತೆರವುಗೊಳಿಸಿದ ಸ್ಥಳದಲ್ಲಿ ಪುನಃ ಅಕ್ರಮ ಪ್ರವೇಶ ಮಾಡಿ, ಅನಧೀಕೃತ ಶೆಡ್ ನಿರ್ಮಾಣ ಮಾಡಿ ಅಕ್ರಮವಾಗಿ ಗೂಡಂಗಡಿಯನ್ನು ಮತ್ತೆ ಇಟ್ಟಿದ್ದಾರೆ ಎಂದು ದೂರನ್ನು ದಾಖಲಿಸಿದ್ದರು. ದೂರಿನ ಹಿನ್ನಲೆ ಮತ್ತೆ ಅಧಿಕಾರಿಗಳು ತೆರಳಿ ತೆರವನ್ನು ಮಾಡಿದ್ದಾರೆ. ತಹಶೀಲ್ದಾರ ದಾಖಲಿಸಿದ   ಪ್ರಕರಣ ಚುರುಕುಗೊಳಿಸಿ ಆರೋಪಿತರಾದ ಮಾರುತಿ ನಾಯ್ಕ, ಶಂಕರ  ನಾಯ್ಕ,. ರವಿ ನಾಯ್ಕ ಇವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಚರಣೆ ಮುಂದುವರೆಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಗೂಡಂಗಡಿ ತೆರವು, ನ್ಯಾಯ ಒದಗಿಸುವಂತೆ ಆಗ್ರಹಿಸಿ, ಮಚ್ಚಿನಿಂದ ಕೊಚ್ಚಿ ಕೊಲೆ, ಮಂಜೂರಾದ ನಿವೇಶನದಲ್ಲಿ ಅನಧಿಕೃತ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...