ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ.
ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ ಮಾಡಿಕೊಂಡು ತಮ್ಮ ಜಮೀನುಗಳ ಬೆಳೆ ವಿವರವನ್ನು ಮೊಬೈಲ್ ಆ್ಯಪ್ ನಲ್ಲಿ ಕೂಡಲೇ ಅಪ್ ಲೋಡ್ ಮಾಡಬೇಕು.
ರೈತರು ಬೆಳೆ ಸಮೀಕ್ಷೆ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಬಹುದು. ರೈತರು ತಾವೇ ಸ್ವತಃ ಈ ತಂತ್ರಾಶದಲ್ಲಿ ಬೆಳೆ ವಿವರ ಅಪ್ ಲೋಡ್ ಮಾಡುವುದರಿಂದ ನ್ಯೂನತೆಗಳನ್ನು ಕಡಿಮೆ ಮಾಡಬಹುದು. ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಬಳೆ ಸಮೀಕ್ಷೆ ತಂತ್ರಾಶಲ್ಲಿ ಬೆಳೆ ವಿವರ ಆಪ್ ಲೋಡ್ ಮಾಡುವುದರಿಂದ ಬೆಳೆ ಸಾಲ ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸೌಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗವಾಗಲಿದೆ.
ರೈತರು ಬೆಳೆ ಸಮೀಕ್ಷೆ ತಂತ್ರಾಶ ಬಳಸಲು ಗ್ರಾಮಗಳಿಗೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ ರಾಜ್, ಕೃಷಿ ತೋಟಗಾರಿಕೆ, ಸಾಂಖ್ಯಿಕ ಇ;ಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕಾರವಾರ ಉಪವಿಭಾಗಾಧಿಕಾರಿಗಳಾದ ವಿದ್ಯಾಶ್ರೀ ಚಂದರಗಿ ತಿಳಿಸಿದ್ದಾರೆ.
Leave a Comment