ಮುಂಡಗೋಡ : ವ್ಯಕ್ತಿಯೊಬ್ಬ ಕೆಲಸ ಕೊಡಿಸುವೆನೆಂದು ನಂಬಿಸಿ ಲಕ್ಷಾಂತರ ರೂ.ಗಳ ಹಣ ಪಡೆದು ಮೋಸ ಮಾಡಿದ್ದಾನೆಂದು ಗುರುರಾಯ್ ರಾಯ್ಕರ್ ಎನ್ನುವಾತ ಮುಂಡಗೋಡ ಪೊಲೀಸ್ ದೂರು ದಾಖಲಿಸಿದ್ದಾನೆ.
ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿಯ ಬಸವೇಶ್ವರ ನಗರದ ಸಂತೋಷ ಗುದಗಿ ಎನ್ನುವಾತ ಬೆಂಗಳೂರಿನ ಕಮೀಷನರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ನಂಬಿಸಿ, ಪಟ್ಟಣದ ಗುರುರಾಯ್ ರಾಯ್ಕರ್ ಎನ್ನುವರಿಂದ ಹಾಗೂ ಬೇರೆ ಬೇರೆ ಜನರಿಂದ ತನ್ನ ಖಾತೆಗೆ ಸುಮಾರು ಇಪ್ಪತ್ತೆöÊದು ಲಕ್ಷ ಐವತ್ತು ಸಾವಿರ ರೂ. ಹಣ ಹಾಕಿಸಿಕೊಂಡು ವಿವಿಧ ಜಿಲ್ಲೆಯ ಎಸ್ ಪಿ ಯವರ ನಕಲು ಸಹಿ ಮಾಡಿ ಖೊಟ್ಟಿ ನೇಮಕಾತಿ ದಾಖಲೆಗಳನ್ನು ಯಾವುದೇ ಗಣಕಯಂತ್ರದಲ್ಲಿ ತಯಾರಿಸಿ ನೀಡಿ ಮೋಸ ಮಾಡಿದ್ದಾನೆ.
ನಿಜ ಗೊತ್ತಾದ ಮೇಲೆ ಹಣವನ್ನು ಮರಳಿ ಕೊಡದೆ ಸತಾಯಿಸುತ್ತಿರುವ ವ್ಯಕ್ತಿಯ ಮೇಲೆ ಕಾನೂನು ರೀತಯ ಸೂಕ್ತ ಕ್ರಮ ವಹಿಸಿ ನೋಂದವರಿಗೆ ನ್ಯಾಯ ಕೊಡಿಸಬೇಕೆಂದು ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪಿಐ ಪ್ರಭು ಗೌಡ ಕಿರೆದಳ್ಳಿ ತನಿಖೆ ನಡೆಸುತ್ತಿದ್ದಾರೆ.
Leave a Comment