ಹೊನ್ನಾವರ: ಶರಾವತಿ ನದಿ ಸಮುದ್ರ ಸೇರುವ ಸಂಗಮ ಸ್ಥಳದಲ್ಲಿ ಗಂಗೊಳ್ಳಿ ಮೂಲದ ಶ್ರೀ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಮುಳಗಡೆಯಾಗಿದೆ. ಕಳೆದ ಎರಡು ದಿನದ ಹಿಂದೆ ಆಳ ಸಮುದ್ರಕ್ಕೆ ಮೀನುಗಾರಿಕೆ ತೆರಳಿ ವಾಪಸ್ಸು ಕಾಸರಕೋಡ ಬಂದರು ಪ್ರದೇಶಕ್ಕೆ ಆಗಮಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೋಟ್ ಮುಳಗಡೆಯಿಂದ ಅಪಾರ ಪ್ರಮಾಣದ ಮೀನು ಹಾಗೂ ಬೋಟನಲ್ಲಿರುವ ಸಲಕರಣೆ ಸಮುದ್ರದ ಪಾಲಾಗಿದೆ. ಅಂದಾಜು ೨೮ಲಕ್ಷ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರರಿಗೆ ಅಳವೆ ಸಮಸ್ಯೆ ಈ ಹಿಂದಿನಿಂದಲೂ ಕಾಡುತ್ತಿದ್ದು ಆಡಳಿತ ನಡೆಸುವ ಸರ್ಕಾರ ಅಳವೆ ಸಮಸ್ಯೆ ಬಗೆಹರಿಸಲು ಮೀನಾಮೇಷ ನಡೆಸುತ್ತಿದೆ.

ಪ್ರತಿ ವರ್ಷ ಹತ್ತಾರು ಬೋಟ್ ಈ ಅಳವೆ ಪ್ರದೇಶದಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದರೂ ಈ ಬಗ್ಗೆ ಸರ್ಕಾರ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎನ್ನುವುದು ಮೀನುಗಾರರ ಆರೋಪವಾಗಿದೆ.
Leave a Comment