ಭಟ್ಕಳ ;
ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತ ರೂ. ಆಭರಣಗಳನ್ನು ಕದ್ದೊಯ್ದಿರುವ ಘಟನೆ ಭಟ್ಕಳ ತಾಲೂಕಿನ ತಗ್ಗರಗೋಡದಲ್ಲಿ ನಡೆದಿದ್ದು ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಟ್ಕಳ ತಾಲೂಕಿನ ಜಾಲಿ ರೋಡ್ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎನ್ನುವವರು ಈ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಆಗಸ್ಟ್ 28 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 4 ಗಂಟೆಯ ಅವಧಿಯಲ್ಲಿ ತಮ್ಮ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಬಲವಾದ ವಸ್ತುವಿನಿಂದ ಒಡೆದು ಮನೆಯ ಬೆಡ್ ರೂಮಿನ ಅಲ್ಮೇರಾದ ಬಾಗಿಲನ್ನು ತೆರೆದು ಅದರಲ್ಲಿದ್ದ 35 ಸಾವಿರ ರೂ. ಬೆಲೆಯ 3 ಜೊತೆ ಕಿವಿ ಓಲೆ, 20 ಸಾವಿರ ರೂ. ಬೆಲೆಯ 2 ಉಂಗುರಗಳು, 70 ಸಾವಿರ ರೂ. ಬೆಲೆಯ 1 ನೆಕ್ಲೇಸ್ ಹಾಗೂ 15 ಸಾವಿರ ರೂ. ಬೆಲೆಯ 1 ಬ್ರೇಸಲೆಟ್ ಸೇರಿ ಒಟೂ 73.5 ಗ್ರಾಂ ತೂಕದ ಅಂದಾಜು 1,40,000 ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಭಟ್ಕಳ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Leave a Comment