ಸುವರ್ಣ ಆರೋಗ್ಯ ಸುರಕ್ಷಾ ಟಸ್ಟ್ ನಡಿ ಅನುಷ್ಟಾನಗೊಳ್ಳುತ್ತಿರುವ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಗೆ ದಿನಾಂಕ 23/09/21 ಕ್ಕೆ ಮುರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಆರೋಗ್ಯ ಮಂತನ ಹಾಗೂ ಆಯುಷ್ಮಾನ ಭಾರತ ಪಕ್ವಾರ್ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದು ಈ ಹಿನ್ನಲೆಯಲ್ಲಿ ತಾಲೂಕಾ ಆಸ್ಪತ್ರೆಯ ಹೊನ್ನಾವರದಲ್ಲಿ ದಿನಾಂಕ 23/09/21 ರಂದು ಕರ್ತವ್ಯ ನಿರತ ವೈದ್ಯರುಗಳ ಸಹಕಾರದೊಂದಿಗೆ ಆರೋಗ್ಯ ಶಿಭಿರ ನಡೆಲಾಗುತ್ತಿದ್ದು ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತೆ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕಿಣಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆರೋಗ್ಯ ಶಿಭಿರಿದ ಕುರಿತು ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಮಿತ್ರರಾದ ವೆಂಕಟೇಶ ಪಟಗಾರರವರನ್ನು (8861005508) ಸಂಪರ್ಕಿಸಲು ಕೋರಿದೆ
Leave a Comment