ಕಾರವಾರ : ಕೇಂದ್ರ ಸರಕಾರದ ಗ್ರಾಮೀಣಭಿವೃದ್ಧಿ ಮಂತ್ರಾಲಯದಡಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ 10 ದಿನಗಳ ಕುರಿ ಸಾಗಾಣಿಕೆ ಹಾಗೂ ಹೈನುಗಾರಿಕೆ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮೀಣ ಭಾಗದಅರ್ಹ ಬಿಪಿಎಲ್ ಕುಟುಂಬದ 18ರಿಂದ 45 ವಯಸ್ಸಿನ ಕೃಷಿಕರಿಗೆ ಆರ್ಥಿಕ ಪ್ರಗತಿ ಹೊಂದಲು ಹಾಗೂ ಸ್ವಉದ್ಯೋಗ ಕೈಗೊಳ್ಳಲು ತರಬೇತಿಯ ಅನುಕೂಲವಾಗಲಿದೆ. 10 ದಿನಗಳ ಕಾಲ ಊಟ ವಸತಿ ಉಚಿತವಾಗಿರುತ್ತದೆ.
ಗ್ರಾಮೀಣ ಭಾಗದ ಬಿಪಿಎಲ್ ಕುಟುಂಬದವರಿಗೆ ಮೊದಲ ಆದ್ಯತೆ ಕನ್ನಡ ಓದಲು ಬರೆಯಲು ಬರುತ್ತಿರಬೇಕು. ತರಬೇತಿಯಲ್ಲಿ ಸಾಫ್ಟ್ ಸ್ಟೀಲ್ಸ್ ಯೋಗತರಬೇತಿ ಹಾಗೂ ಬ್ಯಾಂಕಿAಗ್, ಸರಕಾರಿ ಯೋಜನೆಗಳು ಮತ್ತು ಯೋಜನೆ ವರದಿ ತಯಾರಿಕೆ ಬಗೆಗಿನ ಉದ್ಯಮಶೀಲತಾ ಅಭಿವೃಧ್ಧಿ ಯ ಮಹಿತಿಯನ್ನು ಉಚಿತವಾಗಿ ನೀಡಲಾಗುವುದು.
ಆಸಕ್ತರು ಸೆ.27 ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವಉದ್ಯೋಗ ತರಬೇತಿ ಸಂಸ್ಥೆ ಹಳಿಯಾಳ ಉತ್ತರಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ : 94834 85489. 94821 88780. 97433 21062. 81970 22501. ದೂರವಾಣಿ ಸಂಖ್ಯೆ : 08284-295307ಗೆ ಸಂಪರ್ಕಿಸಬಹುದಾಗಿದೆ ಎಂದು ಕೆನರಾ ಬ್ಯಾಂಕ್ ನಿರ್ದೆಶಕ ಪ್ರಸನ್ನ ಕುಮರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment