• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಳೆಗಾಲದ ನೀರಿನಿಂದ ಮನೆ ಕುಸಿಯುವ ಆತಂಕ

September 26, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮದ  ಭಾಸ್ಕೇರಿಯ ಬಾಬು ನಾಯ್ಕ ಇವರ ಮನೆ ಮಳೆಗಾಲದಲ್ಲಿ ಭಾಸ್ಕೇರಿ ಹೊಳೆಗೆ ಹರಿದು ಬರುವ ನೀರಿನಿಂದ ಮಣ್ಣು ಕೊರೆತ ಸಂಭವಿಸಿ ಮನೆಯೇ   ಕುಸಿತವಾಗುವ ಆತಂಕ ಎದುರಾಗಿದೆ. ಪ್ರತಿ ಮಳೆಗಾಲದಲ್ಲಿ ನೆರೆ ಆವರಿಸುವ ಭಾಸ್ಕೇರಿ ಹೊಳೆಯ ಸಮೀಪದಲ್ಲೆ ಇರುವ ಬಾಬು ನಾಯ್ಕ ಇವರ ಮನೆ ಮುಂದಿನ ದಿನದಲ್ಲಿ ಕುಸಿಯುವ ಹಂತ ತಲುಪಿದೆ.

ಮಳೆಗಾಲದಲ್ಲಿ ಈ ಭಾಸ್ಕೆರಿ ನದಿಯು ತುಂಬಿ ಹರಿಯುವುದರಿಂದ ಇಲ್ಲಿನ ನಿವಾಸಿಗಳ ಮನೆಗೆ ನೀರು ನುಗ್ಗಲಿದೆ. ಅಲ್ಲದೆ ಕಳೆದ ಹಲವು ವರ್ಷದದಿಂದ ನೀರಿನ ರಬಸಕ್ಕೆ ಹೊಳೆಯ ಪಕ್ಕದಲ್ಲಿರುವ ದಂಡೆಯ ಮಣ್ಣು ಕುಸಿದು ನೀರುಪಾಲಾಗುತ್ತಿದೆ. ಯಾವುದೇ ತಡೆಗೋಡೆ ಇರದ ಕಾರಣ ವರ್ಷದಿಂದ ವರ್ಷಕ್ಕೆ ಮಣ್ಣು ಕೊಚ್ಚಿ ಹೋಗಿ ನೀರು ಪಾಲುಗುತ್ತಿದೆ.

IMG20210924124000

ಹತ್ತಾರು ಮನೆಗಳಿಗೆ ತೆರಳುವ ಮಾರ್ಗವು ಬಂದ್ ಆಗಿದ್ದು ಬದಲಿ ಮಾರ್ಗ ಅನುಸರಿಸುತ್ತಿದ್ದಾರೆ. ನದಿ ತಿರುವು ಇರುವ ಪ್ರದೇಶಗಳಲ್ಲಿ ಅತಿ ಹೆಚ್ಚು ಕೊರೆತ ಉಂಟಾಗುದರಿಂದ ಈ ಭಾಗಕ್ಕೆ ತಿವ್ರ ಹಾನಿಯಾಗಿದೆ. ಇದೀಗ ಮನೆ ಸಮೀಪ ವ್ಯಾಪಿಸಿರುದರಿಂದ ಮಳೆಗಾಲದಲ್ಲಿ  ಆತಂಕದಲ್ಲೆ ಜೀವನ ನಡೆಸುವ ಸ್ಥಿತಿ ಎದುರಾಗಿದೆ.   ಕಳೆದ ೧೦ ವರ್ಷದಲ್ಲಿ ಸುಮಾರು ೧೦ ಅಡಿ ಉದ್ದದ ಜಾಗಗಳು ಕೊರತ ಉಂಟಾಗಿ ತೆಂಗಿನ ಮರಗಳು ಮತ್ತು ಅಡಿಕೆ ಮರಗಳು ನೀರು ಪಾಲಾಗಿದೆ.

ಪ್ರತಿ ಬಾರಿ ನೆರೆ ಬಂದಾಗ ಅಧಿಕಾರಿಗಳು ಜನಪ್ರತಿನಿಧಿಗಳು ಮುಂದಿನ ಬಾರಿ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಅಧಿಕಾರಿಗಳು ಜನಪ್ರತಿನಿಧಿಗಳು ಬದಲಾದರೂ ಸಮಸ್ಯೆ ಮಾತ್ರ ಹೆಚ್ಚಾಗುತ್ತಲ್ಲೆ ಇದೆ ಎನ್ನುವುದು ಸ್ಥಳಿಯ ನಿವಾಸಿಗಳು ಆರೋಪಿಸುತ್ತಿದ್ದಾರೆ.  ೨೦ ವರ್ಷದಿಂದ ವಿವಿಧ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಲವು ಬಾರಿ  ಮನವಿ ನೀಡಿದರು ಯಾವುದೇ  ಪ್ರಯೋಜನವಾಗಿಲ್ಲ ಕಾಟಚಾರಕ್ಕೆ ಸ್ಥಳ ವಿಕ್ಷಣೆ ಮಾಡಿ ಭರವಸೆ ನೀಡುವುದೇ ಹೋರತು ಈವರೆಗೂ ನ್ಯಾಯ ದೊರಕಿಲ್ಲ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ‌ಮನೆ ಮಾಲೀಕ ಬಾಬು ನಾಯ್ಕ ಮಾತನಾಡಿ ಮಳೆಗಾಲದಲ್ಲಿ ಈ ಭಾಗದವರು ರಾತ್ರಿ ಹಗಲು ಭಯದಲ್ಲೇ ಜೀವನ ನಡೆಸುವ ಸ್ಥಿತಿ ಇದೆ. ನೀರು ಬಂದು ದಂಡೆಯನ್ನು ಕೊಚ್ಚಿಕೊಂಡು ಹೋಗುತ್ತಿದೆ. ಮನೆಯ ಹತ್ತಿರ ಬಂದಿದೆ. ಈಗಾಗಲೆ ೧೦ ಅಡಿ ಉದ್ದದಷ್ಟು ಜಾಗ ಕೊಚ್ಚಿ ನೀರು ಪಾಲಾಗಿದೆ. ವಿವಿಧ ಇಲಾಖೆಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿ ಸಾಕಾಗಿದೆ ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಅತಿ ಹೆಚ್ಚು ಕೊರೆತ ಉಂಟಾಗುದರಿಂದ, ಆತಂಕದಲ್ಲೆ ಜೀವನ ನಡೆಸುವ ಸ್ಥಿತಿ, ಕಾಟಚಾರಕ್ಕೆ ಸ್ಥಳ ವಿಕ್ಷಣೆ, ಭಯದಲ್ಲೇ ಜೀವನ ನಡೆಸುವ ಸ್ಥಿತಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...