ಅಂಕೋಲಾ: ಅಪರಿಚಿತ ವಾಹನ ಬಡಿದು ಬಸ್ ಪ್ರಯಾಣಿಕನೋರ್ವನ ಕೈ ತುಂಡಾಗಿರುವ ಘಟನೆ ಮಂಗಳವಾರ ನಡೆದಿದ್ದು ಶನಿವಾರ ಪೊಲೀಸ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಹಾವೇರಿ ಮೂಲದ ನದೀಮ್ ಬಸೀರ ಅಹಮ್ಮದ ತಾವರಗಿ(33) ಎಂಬತನ ಕೈ ತುಂಡಾಗಿರುವುದು.
ಈತನು ಬಸ್ನ ಕೊನೆಯ ಸಿಟ್ನಲ್ಲಿ ಕುಳಿತಿದ್ದು ಕಿಟಕಿ ಬಳಿ ಕೈ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಪ್ರಯಾಣಿಕನ ಕೈಗೆ ಅಪರಿಚಿತ ವಾಹನ ಬಡಿದು ಕೈ ತುಂಡಾಗಿದೆ. ತಕ್ಷಣ ಇವರು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಬಳಿಕ ಅಂಕೋಲಾಕ್ಕೆ ಬಂದು ಠಾಣೆಯಲ್ಲಿ ಬಸ್ ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ಗಾಯಾಳುವಿನ ಅಣ್ಣ ಶಹಬಾಜ್ ತಾವರಗಿ ದೂರು ನೀಡಿದ್ದು ಅಂಕೋಲಾ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿ.ಪಿ.ಐ.ಸಂತೋಷ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Leave a Comment