ಹೊನ್ನಾವರ : ತಾಲೂಕಿನ ನಿಲ್ಕೋಡಿನಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ ಕಂಡಿದೆ. ಘಟನೆಯಲ್ಲಿ ದತ್ತಾತ್ರೇಯ ಪರಮೇಶ್ವರ ಹೆಗಡೆ (72) ಇವರು ಮೃತಪಟ್ಟಿದ್ದಾರೆ. ಆರೋಪಿ ಸುಬ್ರಾಯ ಗಣೇಶ ಹೆಗಡೆ ಸೋಮವಾರ ರಾತ್ರಿ ದತ್ತಾತ್ರೇಯ ಹೆಗಡೆಯವರಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದು, ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆರೊಗ್ಯದಲ್ಲಿ ಏರುಪೇರಾದಾಗ ಹೊರ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮೃತರಾಗಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಮಗ ನಾಗರಾಜ ದತ್ತಾತ್ರೇಯ ಹೆಗಡೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು
ಆರೋಪಿ ಸುಬ್ರಾಯ ಹೆಗಡೆ ಮೃತ ವ್ಯಕ್ತಿಯ ದಾಯಾದಿ ಸಂಬAಧಿ ಆಗಿದ್ದು, ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹಿಂದಿನಿAದಲೂ ದಾಯಾದಿಗಳ ನಡುವೆ ಆಗಾಗಜಗಳವಾಗುತ್ತಿತ್ತು. ದತ್ತಾತ್ರೇಯ ಹೆಗಡೆ ಇವರಿಗೆ ಕೊಲೆಮಾಡುವದಾಗಿ ಜೀವ ಬೆದರಿಕೆ ಹಾಕಿದ್ದರು.
ಸೋಮವಾರ ರಾತ್ರಿ 09-45 ಸುಮಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದತ್ತಾತ್ರೇಯ ಹೆಗಡೆಯವರಿಗೆ ಕತ್ತಿಯಿಂದ ತಲೆಗೆ ತೀವ್ರವಾಗಿ ಹಲ್ಲೆಮಾಡಿದ್ದನು. ಹೆಚ್ಚಿನ ಚಿಕಿತ್ಸೆಗೆ ಮಂಗಳವಾರ ದತ್ತಾತ್ರೇಯ ಹೆಗಡೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಈ ಸಂಬAಧ ಹೊನ್ನವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment