ಹೊನ್ನಾವರ: ಸ್ವಚ್ಚಹೊನ್ನಾವರ ಮಾಡಲು ಸಂಘಸಂಸ್ಥೆಯವರು, ಸಾರ್ವಜನಿಕರು ಪಟ್ಟಣ ಪಂಚಾಯತಿಯೊಂದಿಗೆ ಕೈ ಜೊಡಿಸುವಂತೆ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ ಮನವಿ ಮಾಡಿದ್ದಾರೆ.ಪಟ್ಟಣ ಪಂಚಾಯತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ತಾಲೂಕಿನಲ್ಲಿ ಹಲವಾರು ಸಂಘಟನೆಗಳಿವೆ.
ಸ್ವಚ್ಚ ಹೊನ್ನಾವರ ಪರಿಕಲ್ಪನೆಗೆ ಈಗಾಗಲೇ ಹಲವು ಸಂಘಟನೆ ಕೈಜೋಡಿಸಿದೆ. ಯುವಬ್ರೀಗೆಡ್ ಪ್ರಭಾತನಗರದ ಪುರಭವನ ಸ್ವಚ್ಚತಾ ಕಾರ್ಯ ನಡೆಸಿದೆ. ಅಕ್ಟೋಬರ್ ೨ರ ಗಾಂಧೀಜಯಂತಿಯಿಂದ ಆರಂಭವಾಗುವ ಸ್ವಚ್ಚತಾ ಕಾರ್ಯ ತಾಲೂಕಿನ ಸಂಘ ಸಂಸ್ಥೆಯವರು ಕೈಜೋಡಿಸಿ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಪಟ್ಟಣದಲ್ಲಿ ಯು.ಜಿ.ಡಿಯಿಂದ ರಸ್ತೆ ಅವ್ಯವಸ್ಥೆ ಆಗಿದ್ದರು, ಚೌತಿ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಗಣೇಶೊತ್ಸವ ಸಮಯದಲ್ಲಿ ವಿಸರ್ಜನಾ ಮೆರವಣೆಗೆಗೆ ಸಮಸ್ಯೆ ಆಗಬಾರದೆಂದು ತಾತ್ಕಲಿಕವಾಗಿ ೨೦ ಲೋಡ್ ಹಂಚಿನ ಚೂರನ್ನು ತಂದು ಹೊಂಡ ಮುಚ್ಚಿ ಸ್ಪಂದಿಸಿದ್ದೇವೆ. ಮಳೆಗಾಲ ಮುಗಿದ ಬಳಿಕ ಈ ರಸ್ತೆಗೆ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು.
ಪಟ್ಟಣ ಪಂಚಾಯತಿಯು ಪುರಸಭೆಯಾಗಿ ಮೆಲ್ದರ್ಜೆಗೆ ಏರಿಸಲು ಶಾಸಕ ದಿನಕರ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಥಮ ಹಂತವಾಗಿ ಜಿಲ್ಲಾ ಉಸ್ತುವಾರಿ ಸಚೀವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರಬ ಮಾತನಾಡಿ ೨೦೧೧ರ ಜನಗಣತಿ ಪ್ರಕಾರ ೧೯೧೦೯ ಜನಸಂಖ್ಯೆ ಪಟ್ಟಣದಲ್ಲಿದ್ದು, ಇದೀಗ ೨೩ ಸಾವಿರಕ್ಕೂ ಅಧಿಕವಾಗಿದೆ. ಪುರಸಭೆಯಾಗಿ ಮಾರ್ಪಟ್ಟರೆ ೫೦ ರಿಂದ ೫೫ ಪೌರಕಾರ್ಮಿಕರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಗಳು ಇರಲಿದ್ದಾರೆ. ಪಟ್ಟಣ ನಿವಾಸಿಗಳ ಸಮಸ್ಯೆಗೆ ಶಿಘ್ರ ಸ್ಪಂದನೆ ನೀಡಲು ಸಾಧ್ಯವಿದೆ.
ಪ್ರಸ್ತುತ ೧೯ ಪೌರಕಾರ್ಮಿಕರಿದ್ದು ಇವರ ಮೂಲಕವೇ ಸ್ವಚ್ಚತಾ ಕಾರ್ಯ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ವಕಿರಿಯ ಆರೊಗ್ಯ ನಿರೀಕ್ಷಿಕ ಸುನೀಲ ಗಾವಡಿ ಮಾತನಾಡಿ ಸ್ವಚ್ಚಸುಂದರ ಆರೊಗ್ಯ ಪೂರ್ಣ ಹೊನ್ನಾವರ ಮಾಡಲು ಶ್ರಮಿಸುತ್ತಿದ್ದು, ನಮ್ಮಲ್ಲಿರುವ ಕೆಲವೇ ಕೆಲವು ಸಿಬ್ಬಂದಿಯ ಸಹಕಾರದಿಂದ ಸ್ವಚ್ಚತೆ ನಡೆಸುತ್ತಿದ್ದೇವೆ. ಪಟ್ಟಣದ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ತಮ್ಮಲ್ಲಿ ಸಂಗ್ರಹವಾಗುವ ಹಸಿ ಹಾಗೂ ಒಣಕಸ ವಿಂಗಡಿಸಿ ನೀಡಬೇಕಿದೆ. ಇದರಿಂದ ಪಟ್ಟಣ ಸಹಜವಾಗಿಯೇ ಸ್ವಚ್ಚವಾಗಲಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ಮಾಡಬೇಕಿದೆ ಎಂದರು.
Leave a Comment