ಹೊನ್ನಾವರ ; ತಾಲೂಕಿನ ಕೋಟೆಬೈಲ್ ಕೆಂಚಗಾರ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಲಾಭಕ್ಕೋಸ್ಕರ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಅಂದರ್-ಬಾಹರ್ ಜೂಗಾರಾಟವನ್ನು ಆಡುತ್ತಿದ್ದಾಗ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಸುಬ್ರಹ್ಮಣ್ಯ ಶಿವಾ ಆಚಾರಿ, ಹಡಿನಬಾಳ, ರೋಹನ್ ಕೋಸ್ತಾ ಫರ್ನಾಂಡಿಸ್ ಗುಂಡಬಾಳ, ಸತೀಶ ರಾಮಾ ನಾಯ್ಕ,ಕೆಂಚಗಾರ, ಸುಭ್ರಾಯ ಮಂಜು ನಾಯ್ಕ ಕಡಗೇರಿ, ಶ್ರೀಧರ ಶಿವಾ ನಾಯ್ಕ, ಜನಕಡಕಲ್, ಮಂಜುನಾಥ ಮಾಸ್ತಿ ನಾಯ್ಕ, ಕೆಂಚಗಾರ, ಇವರನ್ನು ಬಂಧಿಸಿಲಾಗಿದೆ.

ಇನ್ನುಳಿದಂತೆ ಅಣ್ಣಪ್ಪ ಗಣಪಯ್ಯ ಗೌಡ, ಗುಂಡಬಾಳ, ರಾಘವೇಂದ್ರ ಲಕ್ಷ್ಮಣ ನಾಯ್ಕ, ಕೆಂಚಗಾರ, ವಿನಾಯಕ ಆಚಾರಿ, ಹಡಿನಬಾಳ, ನಾಗರಾಜ ನಾಯ್ಕ, ಕೊಟೆಬೈಲ್ ಇವರು ದಾಳಿ ವೇಳೆ ನಾಪತ್ತೆಯಾಗಿದ್ದಾರೆ. ನಗದು ಹಣ 15,200/- ರೂಪಾಯಿ, ಜೂಜಾಟಕ್ಕೆ ಬಳಸಿದ ಪರಿಕರವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment