ಹುಬ್ಬಳ್ಳಿ : ಸಾಲುಸಾಲು ಹಬ್ಬದ ನಿಮಿತ್ತ ರಜೆಗಳಿರುವ ಹಿನ್ನಲೆಯಲ್ಲಿ ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್-2020ರಲ್ಲಿ ಇದ್ದಂತೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆಯನ್ನು ಪುನಾರಂಭ ಮಾಡಲಾಗುವುದು ಎಂದು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಉತ್ತೆಕನ್ನಡ, ಹಾವೇರಿ, ಬಾಗಲಕೋಟೆ ಗದಗ, ಚಿಕ್ಕೋಡಿ ವಿಭಾಗಗಳ ಪ್ರಮುಖ ಸ್ಥಳಗಳಿಂದ ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ನೆರೆ ರಾಜ್ಯದ ತಿರುಪತಿ, ಹೈದರಾಬಾದ, ಚೆನ್ನೆöÊ, ಮುಂಬಯಿ, ಪುಣೆ ಹಾಗೂ ಗೋವಾ ಮುಂತಾದ ಸ್ಥಳಗಳಿಗೆ ಅಕ್ಟೋಬರ್ ಮೊದಲ ವಾರದಿಂದ ಪುನರಾರಂಭಿಸಲಗುತ್ತಿದೆ. ಮುಂಗಡವಾಗಿ ಅಸನಗಳನ್ನು ಕಾಯ್ದಿರಿಸಿಕೊಳ್ಳುವ ಪ್ರಯಾಣಿಕರಿಗೆ ಸಂಸ್ಥೆಯ ವತಿಯಿಂದ ರಿಯಾಯತಿ ಸಹ ಪ್ರಕಟಿಸಲಾಗಿದೆ.
ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಮುಂತಾದ ಮಾಹಿತಿಗಳನ್ನು ಪಡೆಯಲು ಸಂಸ್ಥೆಯ ಅವತಾರ್ ಶಾಖೆಯ ಮೊ ಸಂ,-7349766655 ಸಂಪರ್ಕಿಸಬಹುದು. ksrtc mobile app ಮತ್ತು ವೆಬ್ಸೈಟ್ ನಲ್ಲಿ https://ksrtc.in/oprs-web/ಎಲ್ಲ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
Leave a Comment