ಹೊನ್ನಾವರ: ಪಟ್ಟಣದ ರಾಷ್ಟಿçÃಯ ಹೆದ್ದಾರಿ ಹೆದ್ದಾರಿ ಅಗಲಿಕರಣ ಮಾಡುವಂತೆ ಆಗ್ರಹಿಸಿ ಕರುನಾಡ ವಿಜಯ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರು ಹಾಗೂ, ಜಿಲ್ಲಾ ಉಸ್ತುವಾರಿ ಸಚೀವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ ಐ ಆರ್.ಬಿ ಕಂಪನಿ ರಸ್ತೆ ಕಾಮಗಾರಿ ನಡೆಸುತ್ತಿದೆಯಾದರೂ ನೆರೆಯ ಭಟ್ಕಳ ಹಾಗೂ ಕುಮಟಾ ತಾಲೂಕಿಗೆ ಸರ್ವಿಸ್ ರಸ್ತೆ ಭಾಗ್ಯ ನೀಡಿದರೆ, ಹೊನ್ನಾವರಕ್ಕೆ ಮಾತ್ರ ಯಾವ ಮಾದರಿ ಎಂದು ಇದುವರೆಗೂ ಸ್ಪಷ್ಟಪಡಿಸಿಲ್ಲ.
ಈ ಬಗ್ಗೆ ಎರಡು ಕ್ಷೇತ್ರದ ಶಾಸಕರು ಇದುವರೆಗೂ ಯಾವುದೇ ಬಗೆಯ ಆಶ್ವಾಸನೆ ನೀಡಿಲ್ಲ. ಜಿಲ್ಲೆಯ ಸಂಸದರು ತಾಲೂಕಿನ ಸಮಸ್ಯೆ ಬಗ್ಗೆ ಇದುವರೆಗೂ ತುಟಿ ಪಿಟಿಕ್ ಎನ್ನುತ್ತಿಲ್ಲ. ಕ್ಷೇತ್ರದ ಶಾಸಕರು ಎಲ್ಲಿಯೂ ಹೇಳಿಕೆ ನೀಡಿಲ್ಲ. ಪ್ರತಿನಿತ್ಯ ಸಾವಿರಾರು ವಾಹನ ಸಂಚಾರ ನಡೆಸುವ ಈ ರಸ್ತೆಯಲ್ಲಿ ಅಪಘಾತಗಳ ಸರಮಾಲೆ ಇದೀಗ ನಡೆಯುತ್ತಿದೆ. ಭವಿಷ್ಯದ ಹಿತದೃಷ್ಟಿ ಗಮನಿಸಿದರೆ ರಸ್ತೆ ಅಗಲೀಕರಣ ಅಥವಾ ಸರ್ವಿಸ್ ರಸ್ತೆ ಅನಿವಾರ್ಯವಾಗಿದ್ದು, ಸಾರ್ವಜನಿಕರ ಹಿತ ಮನಗಂಡು ಅಗಲೀಕರಣ ಅಥವಾ ಸರ್ವಿಸ್ ರಸ್ತೆ ಮಂಜೂರಿ ಬಗ್ಗೆ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ಬಗ್ಗೆ ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ ತಿಂಗಳ ಹಿಂದೆಯೇ ಮಾಧ್ಯಮಗೊಷ್ಟಿಯಲ್ಲಿ ಮನವಿ ಮಾಡಲಾಗಿತ್ತು. ಇವರೆಗೂ ಪ್ರತಿಫಲ ದೊರೆತಿಲ್ಲ. ಇದೀಗ ಲಿಖಿತ ಮನವಿ ನೀಡಿದ್ದು, ಮುಂದೆ ಸಾರ್ವಜನಿಕರೊಡಗೂಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ತಾಲೂಕ ಗೌರವಧ್ಯಕ್ಷ ಸದಾನಂದ ಭಟ್ ಮಾತನಾಡಿ ತಾಲೂಕಿನ ಹಳದೀಪುರ ಹಾಗೂ ಕಾಸರಕೋಡ ಭಾಗದಲ್ಲಿ ಬಂದರು ನಿರ್ಮಾಣವಾಗಲಿದೆ. ಈ ಎರಡು ಸ್ಥಳದ ಮಧ್ಯ ಇರುವ ಹೊನ್ನಾವರ ಪಟ್ಟಣದಲ್ಲಿ ಜನಸಂಚಾರ ಹಾಗೂ ವಾಹನ ದಟ್ಟನೆ ತಪ್ಪಿಸಲು ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ.
ಜಿಲ್ಲಾ ವಕ್ತಾರ ಶ್ರೀರಾಮ ಜಾದುಗಾರ ಮಾತನಾಡಿ ಕ್ಷೇತ್ರದ ಶಾಸಕರಿಗೆ ಸಾರ್ವಜನಿಕರ ಸಮಸ್ಯೆ ಮನವರಿಕೆ ಮಾಡಲು ಮನವಿ ನೀಡಲು ಸಮಯವಕಾಶ ಕೇಳಿದರೆ ರಜತÀಗಿರಿಗೆ ಖಾಸಗಿ ಹೋಟೇಲಗೆ ಬರಲು ಹೇಳುತ್ತಾರೆ. ನಾವು ಶಾಸಕರ ಕಛೇರಿಗೆ ಹಾಗೂ ಪ್ರವಾಸಿ ಮಂದಿರಕ್ಕೆ ಆಹ್ವಾನಿಸಿದರೆ ಅಲ್ಲಿ ಬಂದರೆ ಸಾರ್ವಜನಿಕರು ಬರುತ್ತಾರೆ ಎಂದು ಉಡಾಪೆ ಉತ್ತರ ಕೊಡುತ್ತಾರೆ. ಜನನಾಯಕರಾಗುವುದು ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಎನ್ನುವ ಅರಿವಿಲ್ಲ. ಮುಂದಿನ ದಿನದಲ್ಲಿ ವಾಹನ ತಡೆದು ರಸ್ತೆ ಅಗಲೀಕರಣದ ಬಗ್ಗೆ ಮನವಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಪದಾಧಿಕಾರಿಗಳಾದ ಸಂದೇಶ ನಾಯ್ಕ, ಭಾಸ್ಕರ ತಾಂಡೇಲ್, ರಾಹುಲ್, ಅಲ್ತಾಪ್, ನಿತಿನ್ ಆಚಾರ್ಯ, ಗೀರೀಶ ನಾಯ್ಕ ಹಡಿಕಲ್, ಸದಸ್ಯರಾದ ಗಜಾನನ ನಾಯ್ಕ, ಯೋಗೀಶ ನಾಯ್ಕ, ಕುಮಾರ ನಾಯ್ಕ, ದಿಲೀಪ ನಾಯ್ಕ, ಸಂದೀಪ ನಾಯ್ಕ ಉಪಸ್ಥಿತರಿದ್ದರು
Leave a Comment