ತುಮಕೂರು : ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯನ್ನು ಹೆದರಿಸಿ ಅತ್ಯಾಚಾರವೆಸೆಗಿ ಸುಲಿಗೆ ಮಾಡಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಮAಡ್ಯ ಜಿಲ್ಲೆಯ ದೊಡ್ಡನಾಗನಹಳ್ಳಿಯ ಪ್ರದೀಪ್ (37) ಬಂಧಿತ. ಅಮೃತೂರು ಠಾಣಾ ವ್ಯಾಪ್ತಿಯ ಶ್ರೀನಿವಾಸ ದೇವರ ಬೆಟ್ಟದಲ್ಲಿ ಆ. 1 ರಂದು ಮಹಿಳೆ ಮೇಲೆ ಅತ್ಯಾಚಾರವೆಸಗಿ, ಮಾಂಗಲ್ಯಸರ, ಮೊಬೈಲ್, ಎಟಿಎಂ ಕಾರ್ಡ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ.
ತಾನು ಪೊಲೀಸ್ ಎಂದು ಹೇಳಿಕೊಂಡು ಪ್ರಕರಣವೊಂದಕ್ಕೆ ಸಂಭAಧಿಸಿದAತೆ ನಿಮ್ಮನು ಠಾಣೆಗೆ ಕರೆತರಲು ಸಬ್ ಇನ್ಸ್ಪೆಕ್ಟರ್ ಹೇಳಿದ್ದಾರೆ ಎಂದು ಭಯಪಡಿಸಿ, ಬಲವಂತದಿAದ ಎಡೆಯೂರು ಬಳಿಯ ಶ್ರೀನಿವಾಸಬಬೆಟ್ಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಆರೋಪಿವಿರುದ್ಧ ಬೆಂಗಳೂರು, ಮೈಸೂರು, ಹಾಸನ ಸೇರಿ ವಿವಿಧೆಡೆ 17 ಪ್ರಕರಣ ದಾಖಲಾಗಿವೆ. ಒಂಟಿ ಮಹಿಳೆಯರನ್ನು ಗುರಿಯಾಸಿಕೊಂಡು ಸುಲಿಗೆ ಮಾಡುತ್ತಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿತಿಳಿಸಿದ್ದಾರೆ.
Leave a Comment