ಬೇಗೊರಿನ ಚೌಡೇಶ್ವರಿನಗರದ ಮನೆಯೊಂದರಲ್ಲಿ ಹಾಡಹಗಲೇ ತಾಯಿ-ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಆರೋಪಿಯ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಸದ್ಯದಲ್ಲೇ ಬಂಧಿಸಲಿದ್ದಾರೆ.
ಪರಿಚಯವಿರುವ ವ್ಯಕ್ತಿಯಿಂದಲೇ ಈ ಜೋಡಿ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಬೇಗೂರು ಠಾಣೆ ಪೊಲೀಸರು, ವಾಸದ ಮನೆ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಪುಟೇಜ್ಗಳನ್ನು ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿಯವರಾದ ಇವರು ಜೀವನೋಪಾಯಕ್ಕಾಗಿ ಉದ್ಯೋಗ ಅರಸಿಕೊಂಡು ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ಚೌಡೇಶ್ವರಿ ಲೇಔಟ್ನಲ್ಲಿ 4 ಅಂತಸ್ತಿನ ಮನೆಯ ಮೂರನೇ ಮಹಡಿಯಲ್ಲಿ ವಾಸವಾಗಿದ್ದರು. ಚಂದ್ರಕಲಾ ಅವರು ಗೃಹಿಣಿಯಾಗಿದ್ದು, ಮನೆಯಲ್ಲಿಯೇ ಆಯುರ್ವೇದಿಕ್ ವಸ್ತುಗಳನ್ನು ಆನ್ಲೈನ್ ಮಾರ್ಕೆಟಿಂಗ್ ಅಲ್ಲದೆ ಟೈಲರಿಂಗ್ ಸಹ ಮಾಡುತ್ತಿದ್ದರು.
ಚಂದ್ರಕಲಾ ಚೆನ್ನವೀರಸ್ವಾಮಿ ಗಾರ್ಮೆಂಟ್ಸ್ ಉದ್ಯೋಗಿ ಎಂದಿನAತೆ ಬೆಳ್ಳಿಗೆ ಕೆಲಸಕ್ಕೆ ಹೋಗಿರುವುದನ್ನು ಖಚಿತಪಡಿಸಿಕೊಂಡು ಆರೋಪಿ ಇವರ ಮನೆಗೆ ಬಂದಿದ್ದಾನೆ. ಮೂರು ವರ್ಷದ ರಾತನ್ಯಳನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಆರೋಪಿಯು ಚಂದ್ರಕಲಾ ಅವರ ತಲೆಗೆ ಯಾವುದೋ ಆಯುಧದಿಂದ ಹೊಡೆದು ನಂತರ ಚಾಕುವಿನಿಂದ ಮನಬಂದAತೆ ದೇಹದ 20 ಕ್ಕೂ ಹೆಚ್ಚು ಕಡೆ ಇರಿದು ಬೀಕರವಾಗಿ ಕೊಲೆ ಮಾಡಿದ್ದಾನೆ.
ಕೊಲೆ ಆರೋಪಿಯು ಹಣ, ಆಭರಣಕ್ಕಾಗಿ ಈ ಕೃತ್ಯವೆಸೆಗಿದ್ದಾನೋ, ಇಲ್ಲವೇ ದ್ವೇಷದಿಂದಲೋ ಅಥವಾ ಬೇರೆ ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆಂಬ ಬಗ್ಗೆ ಆರೋಪಿಯನ್ನು ಬಂಧಿಸಲು ರಚಿಸಲಾಗಿರುವ ನಾಲ್ಕು ತಂಡಗಳು ಮಾಹಿತಿ ಕಲೆಹಾಕುತ್ತಿವೆ.
Leave a Comment