ಶಿವಮೊಗ್ಗ : ವ್ಯಕ್ತಿಯೋರ್ವ ರಸ್ತೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಗೆ ಶರಣಾದ ಘಟನೆ ತೀರ್ಥಹಳ್ಳಿ ತಾಲೂಕು ಆಕ್ಲಾಪುರದಲ್ಲಿ ಬುಧವಾರ ನಡೆದಿದೆ.
ರಾಘವೇಂದ್ರ (40) ಆತ್ಮಹತ್ಯೆ ಮಾಡಿಕೊಂಡ ಬುಧವಾರ ಬೆಳ್ಳಿಗೆ 5:45ರ ವೇಳೆಗೆ ಮನೆಯಿಂದ ಪೆಟ್ರೋಲ್ ತುಂಬಿದ್ದ ಕ್ಯಾನ್ನೊಂದಿಗೆ ಬೈಕ್ನಲ್ಲಿ ತೆರಳಿದ ರಾಘವೆಂದ್ರ ಗ್ರಾಮದಿಂದ ಸುಮಾರು ಎರಡು ಕಿಮೀ ದೂರವಿರುವ ಜನವಸತಿ ವಿರಳವಿರುವ ಕೋಣಂದೂರು ಸಂಪರ್ಕ ರಸ್ತೆ ಪಕ್ಕದಲ್ಲಿ ಬೆಂಕಿ ಹಚ್ಚಿಕೊಂಡಿದ್ದಾನೆ .
ಆ ಮಾರ್ಗದಲ್ಲಿ ಹಾಲಿನ ವಾಹನವೊಂದು ಬರುವ ವೇಳೆಗೆ ಯುವಕನ ದೇಹ ಬಹುತೇಕ ಸುಟ್ಟು ಕರಕಲಾಗಿತ್ತು. ಆತನ ಬೈಕ್ಗೆ ಸಣ್ಣಗೆ ಬೆಂಕಿ ಹತ್ತಿ ಕೊಂಡಿತ್ತು. ಕೊಡಲೇ ಹಾಲಿನ ವಾಹನದವರು ಬೆಂಕಿ ಆರಿಸಿದರು. ಕೃಷಿ ಕೂಲಿ ಕಾರ್ಮಿಕನಾಗಿದ್ದ ರಾಘವೆಂದ್ರ ಜಮೀನು ವಿವಾದವೊಂದಕ್ಕೆ ಸಂಬAದಿಸಿದAತೆ ನೊಂದಿದ್ದ ಎನ್ನಲಾಗಿದೆ.
Leave a Comment