ನೋಂದಣಿಗೆ ವೆಬ್ ಸೈಟ್ ನಲ್ಲಿ ಅವಕಾಶ
ಬೆಂಗಳೂರು : ಎಲ್ಲ ಶಾಲಾ-ಕಾಲೇಜುಗಳಲ್ಲಿ ಎನ್ ಎಸ್ ಎಸ್ ಚಟುವಟಿಕೆ ಕಡ್ಡಾಯಗೊಳಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಸಾಗಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಹೇಳಿದ್ದಾರೆ.
ನಿಮ್ಹಾನ್ಸ್ ಮೂಲಕ ಎನ್ ಎಸ್ ಎಸ್ ಸ್ವಯಂ ಸೇವಕರರಿಗೆ ಕೌನ್ಸೆಲಿಂಗ್ ತರಬೇತಿ ನೀಡಲಾಗುತ್ತಿದೆ. ಇದುವರೆಗೆ 2,31,000 ಯುವ ಜನರಿಗೆ ಆನ್ ಲೈನ್ ಕೌನ್ಸೆಲಿಂಗ್ ತರಬೇತಿ ನೀಡಲಾಗಿದೆ. ಸ್ವಯಂ ಸೇವಕರ ನೋಂದಣಿಗೆ ವೆಬ್ ಸೈಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಯುವ ಸ್ಪಂದನೆಗಾಗಿ ಮೊದಲ ಬಾರಿಗೆ ಸಹಾಯವಾಣಿ ಕೇಂದ್ರ ತೆಗೆಯಲಾಗಿದೆ ಎಂದಿದ್ದಾರೆ.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಎನ್ ಎಸ್ ಎಸ್ ಸಹಯೋಗದೊಂದಿಗೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಇದುವರೆಗೂ 1 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಅಕ್ಟೋಬರ್ 1 ರಿಂದ 31 ರವರೆಗೆ 75 ಲಕ್ಷ ಟನ್ ತ್ಯಾಜ್ಯ ಸಂಗ್ರಹಿಸಿ, ಸಮರ್ಪಕ ನಿರ್ವಹಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಎನ್ನೆಸ್ಸೆಸ್, ಎನ್ಸಿಸಿ ಎನ್ಇಪಿ ವ್ಯಾಪ್ತಿಗೆ ಇಷ್ಟು ದಿನ ಎನ್ ಎಸ್ ಎಸ್ ಪಠ್ಯೇತರ ಚಟುವಟಿಕೆ ಆಗಿತ್ತು. ಆದರೀಗ ರಾಷ್ಟಿçÃಯ ನೂತನ ಶಿಕ್ಷಣ ನೀತಿಯಲ್ಲಿ ಎನ್ ಎಸ್ ಎಸ್ ಹಾಗೂ ಎನ್ಸಿಸಿ ಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಿಂದ ಎನ್ ಎಸ್ ಎಸ್ ಗೆ ಸೇರಿಕೊಳ್ಳಲು ಅನುಕೂಲ ಆಗಲಿದೆ ಬಜೆಟ್ನಲ್ಲಿ ಹೆಚ್ಚಿನ ಹಣವನ್ನು ಕ್ರೀಡಾ ಇಲಾಖೆಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಕ್ರೀಡೆ ಇದ್ದರೆ ಎಲ್ಲವೂ ಸಿಗಲಿದೆ. ಉನ್ನತ ಶಿಕ್ಷಣ ಇಲಾಖೆಯಿಂದ ಯುವ ಸಬಲೀಕರಣ ಹಾಗೂ ಕ್ರೀಡಾಇಲಾಖೆಗೆ ಬೇಕಾದ ಎಲ್ಲಾ ರೀತಯ ನೆರವು ನೀಡಲಾಗುವುದು. ( ಸಚಿವ ಅಶ್ವತ್ಥ ನಾರಾಯಣ)
ಮುಖ್ಯಮಂತ್ರಿಯವರು ಘೋಷಿಸಿದ ಅಮೃತ ಸಮುದಾಯದ ಅಭಿವೃದ್ಧಿ ಯೋಜನೆಯ ಜವಬ್ದಾರಿಯನ್ನು ಎನ್ ಎಸ್ ಎಸ್ ಗೆ ನೀಡಲಾಗಿದ್ದು, 750 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಈ ಗ್ರಾಮಗಳ ಸಂಪೂರ್ಣ ಚಿತ್ರಣವನ್ನು ಎನ್ ಎಸ್ ಎಸ್ ಯಶಸ್ವಿಯಾಗಿ ದಾಖಲಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇತರೆ ಇಲಾಖೆಗಳೊಂದಿಗೆ ಜೋಡಿಸಲಿದೆ ಎಂದು ಹೇಳಿದ್ದಾರೆ.
Leave a Comment