ಬೆಂಗಳೂರು : ಅ.15: ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ವಂಚಿಸಿದ್ದ ಆರೋಪದಡಿ ಪ್ರಾಧ್ಯಾಪಕರನ್ನು ವಿಧಾನಸೌಧ ಠಾಣಾ ಪೊಲೀಸರುಬಂಧಿಸಿದ್ದಾರೆ.
ಮೈಸೂರಿನ ಖಾಸಗಿ ಕಾಲೇಜೊಂದರ ಪ್ರಾಧ್ಯಾಪಕ ಸುರೇಶ್ ಯಾನೆ ನಾಗರಾಜ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಪ್ರಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಂಚನೆಗೊಳಗಾದ ಯುವತಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆಕಂಪ್ಯೂಟರ್ ಸೆಂಟರ್ ಗೆ ಸುರೇಶ್ ಪತ್ರವೊಂದನ್ನು ಟೈಪ್ ಮಾಡಿಸಲು ತೆರಳಿದ್ದಾಗ ಆ ಯುವತಿಯು ಎಲ್ಲಾದರೂ ಕೆಲಸವಿದ್ದರೆ ತಿಳಿಸಿ ಎಂದು ಮನವಿ ಮಾಡಿದ್ದಳು ಎನ್ನಲಾಗಿದೆ.
ಇದನ್ನೇ ಬಂಡವಾಳವಾಗಿಸಿಕೊAಡ ಸುರೇಶ್, ಮೈಸೂರಿನ ಮಹರಾಣಿ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಖಾಲಿಯಿದ್ದು ಅದನ್ನು ಕೊಡಿಸಲು 6 ಲಕ್ಚ ರೂ. ಹಣ ಬೇಕು ಎಂದಾ ಆತನ ಮಾತನ್ನು ನಂಬಿ ಯುವತಿಯು ಆರೋಪಿಗೆ 6 ಲಕ್ಷ ರೂ. ಹಣ ನೀಡಿದ್ದಳು. ಬಳಿಕ ಬೇರೊಂದು ಕಂಪ್ಯೂಟರ್ ಸೆಂಟರ್ನಲ್ಲಿ ಸರಕಾರದ ಲೇಟರ್ ಹೆಡ್ನಂತೆ ಲೆರ್ಟೆöÊಪ್ ಮಾಡಿಸಿ. ಮಹಾರಾಣಿ ಕಾಲೇಜಿನ ಎಫ್ ಡಿಎ ಉದ್ಯೋಗ ನೇಮಕಾತಿಯ ಪತ್ರ ಎಂದು ಯುವತಿಗೆ ನೀಡಿದ್ದ. ಯುವತಿ ವಿಧಾನಸೌಧದ ಎಂಎಸ್ ಬಿಲ್ಡಿಂಗ್ನ ಶಿಕ್ಷಣ ಇಲಾಖೆಗೆ ದಾಖಲೆ ಪರಶೀಲನೆಗೆಂದು ತೆರಳಿದ್ದಾಗ ವಂಚನೆ ಬಯಲಾಗಿದೆ.
ನಂತರ ಶಿಕ್ಷಣ ಇಲಾಖೆಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ವಚಾರಣೆಗೊಳಪಡಿಸಿದ್ದಾರೆ.
Leave a Comment