ಭಟ್ಕಳ: ತಾಲೂಕಿನ ಕಾಯ್ಕಿಣಿ ಪಂ.ವ್ಯಾಪ್ತಿಯ ಕ್ಯಾಂಟೀನ್ ಸಮೀಪ ಟಿ.ಟಿ ಹಾಗೂ ಇನೋವಾ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಸಣ್ಣ ಪುಟ್ಟಗಾಯದೊಂದಿಗೆ ಪ್ರಾಣಪಾಯದಿಂದ ಪಾರಾದ ಘಟನೆ ಶನಿವಾರ ನಡೆದಿದೆ.
ಗೋವಾ ಮೂಲದ ಇನೋವಾ ಕಾರೊಂದು ಮುರುಡೇಶ್ವರ ಪ್ರವಾಸ ಮುಗಿಸಿ ಭಟ್ಕಳದ ಕಡೆಗೆ ತೆರಳುವ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರು ಮೂಲದ ಟಿ. ಟಿ ವಾಹನ ಮುರುಡೇಶ್ವರದಿಂದ ಪ್ಭಟ್ಕಳದ ಕಡೆ ತೆರಳುವ ವೇಳೆ ಇನೋವಾ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಅಪಘಾತವಾಗಿದ್ದು ಢಿಕ್ಕಿ ರಭಸಕ್ಕೆ ಇನೋವಾ ಕಾರು ರಸ್ತೆಯ ಡಿವೈಡರ್ ಮೇಲೆ ಹತ್ತಿದೆ. ಈ ಅಪಘಾತದಲ್ಲಿ ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
Leave a Comment