ಸಿದ್ದಾಪುರ : ತಾಲೂಕಿನ ಹಣಜಿಬೈಲಿನ ಪವನ್ ನಾಯ್ಕ ಅವರು ರಕ್ತವಾಂತಿ ಮಾಡಿಕೊಂಡು ಮೃತಪಟ್ಟಿದ್ದು, ಇದಕ್ಕೆ ಸರಕಾರಿ ಆಸ್ಪತ್ರೆಯ ವೈದ್ಯರ ತಪ್ಪು ಚಿಕಿತ್ಸೆಯೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕು ಆಸ್ಪತ್ರೆ ಎದುರು ನಡೆದಿದೆ.
ಅ.25 ರಂದು ಪವನ್ ನಾಯ್ಕ ಅವರು ತಾಲೂಕಿನ ಸರ್ಕಾರಿ ದವಾಖಾನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಮನೆಗೆ ಹೋಗಿದ್ದರು. ಮಂಗಳವಾರ ಬೆಳ್ಳಿಗೆ ನಸುಕಿನಲ್ಲಿ ಈ ಯುವಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಪುನಃ ಈತನನ್ನು ಆಸ್ಪತ್ರೆಗೆ ಕರೆದುಕೊಂಡುಬರುವಾಗ ರಸ್ತೆ ಮಾರ್ಗದಲ್ಲಿ ರಕ್ತಕಾರಿಕೊಂಡು ಮೃತಪಟ್ಟಿದ್ದಾನೆ.
ಮೃತ ಪವನ್ ಆರೋಗ್ಯವಂತ ಸದೃಢ ಯುವಕನಾಗಿದ್ದ. ಸರಕಾರಿ ಆಸ್ಪತ್ರೆಯ ವೈದ್ಯರ ತಪ್ಪು ಚಿಕಿತ್ಸೆಯಿಂದ ಈ ಅವಘಡ ಸಂಭವಿಸಿರಬಹುದಾದ ಅನುಮಾನವಿದೆ ಎಂದು ಹಣಜಿಬೈಲಿನ ಮೃತನ ಕೆಲವು ಸಂಬAಧಿಗಳು ಹಾಗೂ ಊರ ನಾಗರೀಕರು ಮಧ್ಯಾಹ್ನ ತಾಲೂಕು ಆಸ್ಪತ್ರೆ ಬಳಿ ಸೇರಿ ಸೂಕ್ತ ತನಿಖೆಗೆ ಒತ್ತಾಯಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ್ ಪುರಾಣಿಕ, ಕರ್ತವ್ಯನಿರತ ವೈದ್ಯಾಧಿಕಾರಿ ನಾಗರಾಜ ನಾಯ್ಕ ಅವರು ಮೃತನ ತಂದೆ ಕುಮಾರ ನಾಯ್ಕ ಹಾಗೂ ಆತನ ಸಂಬAದಿಗಳಿಗೆ, ಊರಿನ ಜನರಿಗೆ ಯುವಕನ ಸಾವಿಗೆ ಕಾರಣ ಹೇಳಿ ಸಮಾಧಾನಪಡಿಸಿದರು.
Leave a Comment