ಬೆಂಗಳೂರು : ಕಾನ್ಸ್ಟೇಬಲ್ ಪರೀಕ್ಷೆ ವೇಳೆ ಮೊಬೈಲ್ ನ ಇಂಟರ್ ನೆಟ್ ಬಳಸಿ ನಕಲು ಮಾಡಲು ಯತ್ನಿಸಿದ ಮೊತ್ತೊಬ್ಬ ಅಭ್ಯರ್ಥಿ ಸಿಕ್ಕಿಬಿದ್ದಿದ್ದಾನೆ.
ಬೆಳಗಾವಿ ಜಿಲ್ಲೆ ಅಡಹಳಟ್ಟಿ ಗ್ರಾಮದ ಮಲ್ಲಪ್ಪ ಶ್ರೀ ಶೈಲ ಕಲಮಡಿ (24) ಬಂಧಿತನಾಗಿದ್ದು, ಚಿಕ್ಕಸಂದ್ರದ ಸಪ್ತಗಿರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನಡೆದ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಗೆ ಮೊಬೈಲ್ನಲ್ಲಿ ಇಂಟರ್ನೆಟ್ ಬಳಸಿ ಆತ ಜೈಲು ಸೇರುವಂತಾಗಿದೆ.
ಪರೀಕ್ಷೆಗೆ ಹಾಜರಾಗುವ ಮುನ್ನ ಕೊಠಡಿ ಹೊರಗೆ ತನ್ನ ಮೊಬೈಲ್ ಅನ್ನು ಅಭ್ಯರ್ಥಿ ಹೋಗಬೇಕಿತ್ತು. ಆದರೆ, ಮೊಬೈಲ್ ಬಚ್ಚಿಟ್ಟುಕೊಂಡು ಅದರಲ್ಲಿ ಇಂಟರ್ನೆAಟ್ ಸಹಾಯದಿಂದ ಆತ ಪರೀಕ್ಷೆ ಬರೆಯುವ ವೇಳೆ ಕೊಠಡಿ ಮೇಲ್ವಿಚಾರಕಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Leave a Comment