ಬೆಂಗಳೂರು : ದೀಪಾವಳಿ ಹಬ್ಬದ ಹತ್ತರ ಬರುತ್ತಿರುವಾಗ ರಾಜ್ಯದಲ್ಲಿ ಕೊರೊನಾ ಇದ್ದಕ್ಕಿದ್ದಂತೆ ತುಸು ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ಮೂರನೇ ಅಲೆ ಬರುವುದಿಲ್ಲ. ಆಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೋವಿಟ್ ತಾಂತ್ರಿಕ ಸಲಹಾ ಸಮಿತಿ ರಾಜ್ಯದ ಜನತೆಗೆ ದೈರ್ಯ ತುಂಬುತ್ತಿರುವುದರ ಬೆನ್ನಲ್ಲೇ ಗುರುವಾರ ಮಾರಕ ಸೋಂಕಿಗೆ 17 ಜನ ಮೃತಪಟ್ಟಿದ್ದಾರೆ.
ಜೊತೆಗೆ ಒಂದು ದಿನದ ಸೋಂಕಿತರ ಸಂಖ್ಯೆಯೂ 478 ಕ್ಕೆ ಏರಿದೆ. ಹಿಂದಿನ ದಿನ ಸೋಂಕಿತರ ಸಂಖ್ಯೆ 282 ಆಗಿತ್ತು. 334 ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂಡಿದ್ದಾರೆ.
ಇತ್ತ ಬೆಂಗಳೂರಿನಲ್ಲೂ ಕಳೆದ 24 ಗಂಟೆಯಲ್ಲಿ ಪತ್ತೆಯದ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡಿದ್ದು 235 ನೂತನ ಕೇಸ್ಗಳು ಕಂಡು ಬಂದಿದೆ. ಆದರೆ ಗುಣಮುಖರ ಸಂಖ್ಯೆ 161 ಆಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾದವರ ಸಂಖ್ಯೆಯೂ ಇಳಿಮುಖವಾಗಿದೆ. ರಾಜಧಾನಿಯೋಂದರಲ್ಲೇ ಸೋಂಕಿಗೆ 7 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾದ ಜಿಲ್ಲೆಗಳಲ್ಲಿ ಮತ್ತೆ ಬೆಂಗಳೂರನ್ನು ಹೊರತುಪಡಿಸಿ ಅತೀ ಹೆಚ್ಚು ನೂತನ ಕೇಸ್ಗಳು ಕಂಡು ಬಂದ ಕೆಲ ಜಿಲ್ಲೆಗಳೆಂದರೆ ತುಮುಹೂರು -53, ಮೈಸೂರು-47, ದಕ್ಷಿಣ ಕನ್ನಡ – 31, ಕೊಡಗು-29, ಇನ್ನುಳಿದಂತೆ ಬೀದರ್, ಯಾದಗಿರಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಅತ್ತ ಕೋಲಾರ ಜಿಲ್ಲೆಗಳಲ್ಲಿ ಒಂಊ ಕೇಸ್ಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಇಲಾಖೆ ತಿಳಿಸಿದೆ.
Leave a Comment