ಹೊನ್ನಾವರ: ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಕಾಲುಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ರವಿವಾರ ತಾಲೂಕಿನ ನಗರಬಸ್ತಿಕೇರಿಯಲ್ಲಿ ನಡೆದಿದೆ.
ಗೇರುಸೊಪ್ಪದ ನಗರ ಬಸ್ತಿಕೆರಿ ನಿವಾಸಿ ಶಿವು ಗೋಪಾಲ ಶೇರುಗಾರ (30) ಮೃತ ದುರ್ದೈವಿ. ಈತ ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ಯಾವುದೋ ಕಾರಣಕ್ಕೆ ಬಾವಿಯ ಸಮೀಪ ಹೋದಾಗ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment