ತಾಲೂಕಿನ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಮಾಲೀಕತ್ವದ ವತಿಯಿಂದ ಕನ್ನಡ ರಾಜ್ಯೋತ್ಸವ ವಿಶೇಷ ದಿನದಂದು ನೇತ್ರಾಣಿ ಗುಡ್ಡದ ಸಮುದ್ರದಾಳದೊಳಗೆ 20 ಅಡಿ ಕನ್ನಡ ಬಾವುಟ ಹಾರಿಸುವುದರ ಮೂಲಕ ಗಮನ ಸೆಳೆದಿದ್ದಾರೆ.
ಸೋಮವಾರದಂದು ಬೆಳಿಗ್ಗೆ ನೇತ್ರಾಣಿ ಅಡ್ವೆಂಚರ್ಸ್ ಮಾಲೀಕತ್ವರಾದ ಗಣೇಶ ಹರಿಕಾಂತ ಅವರ ನೇತ್ರತ್ವದ ತಂಡದ ಯುವಕರು ಓಷಿಯನ್ ಅಡ್ವೆಂಚರ್ಸ್ ಹೆಸರಿನ ಬೋಟ್ ಮೇಲೆ ಕನ್ನಡದ ಬಾವುಟ ಹಿಡಿದು ಕನ್ನಡ ಪ್ರೇಮಿಗಳು ಬಾವುಟ ಹಾರಿಸಿದ್ದಾರೆ.
ಇನ್ನು ಈ ತಂಡವೂ ತಮ್ಮ ಕನ್ನಡ ಪ್ರೇಮವನ್ನು ಇನ್ನಷ್ಟು ಪ್ರದರ್ಶಿಸಿದ್ದು ಸುಮಾರು 6 ಸ್ಕೂಬಾ ಡೈವರ್ಸ್ಗಳು ನೇತ್ರಾಣಿ ಗುಡ್ಡದ ಸಮೀಪದ ಸಮುದ್ರದೊಳಗಿಳಿದು 10 ಅಡಿ ಆಳದಲ್ಲಿ ಸುಮಾರು 20 ಅಡಿ ಉದ್ದದ ಕನ್ನಡದ ಬಾವುಟ ಹಾರಿಸಿ ಗಮನ ಸೆಳೆದಿದ್ದಾರೆ.
ತಂಡದಲ್ಲಿ ಗಣೇಶ ಹರಿಕಾಂತ ಹಾಗೂ ನವೀನ ಕಾರವಾರ ಅವರು ಕನ್ನಡ ಬಾವುಟದ ಧ್ವಜ ಹಿಡಿದು ಸಮುದ್ರದೊಳಗೆ ಪ್ರದರ್ಶಿಸಿದರು.ಈ ತಂಡದಲ್ಲಿ ಹರೀಶ ದುರ್ಗೇಕರ್, ಮೋಹಿನ್ ಸೇರಿ 2 ಮಂದಿ ಸ್ಕೂಬಾ ಡೈವರ್ಸ ಪಾಲ್ಗೊಂಡಿದ್ದರು.
Leave a Comment