ಮೈಸೂರು : ತುಂಬು ಗರ್ಭಿಣಿಯೋರ್ವರು ಆಂಬುಲೆನ್ಸ್ ಏರಲು ಹೆರಿಗೆ ನೋವು ಸಹಿಸಿಕೊಂಡೇ ಕಾಡುದಾರಿಯಲ್ಲಿ ಬಂದು ಕಿ.ಮೀ. ನಡೆಯಬೇಕಾಗಿ ಬಂದ ಘಟನೆ ಎಚ್.ಡಿ. ಕೋಟೆ ತಾಲೂಕಿನ ಹಾಡಿಯೊಂದರಲ್ಲಿ ನಡೆದಿದೆ. ಬೊಮ್ಮಲಾಪುರ ಹಾಡಿ ಗ್ರಾಮದ ರಂಜಿತ ಕಾಲುನಡಿಗೆಯಲ್ಲಿ ತೆರಳಿದ ಗರ್ಭಿಣಿ.
ಈ ಕಾ ಡಿಗೆ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ಬಳಿಕ ಆಕೆ ಸುಮಾರು ಬಂದು ಕಿಮೀ ದೂರದಲ್ಲಿ ಕಾದಿದ್ದ ಆ್ಯಂಬ್ಯುಲೆನ್ಸ್ಗಾಗಿ ಕಾಡು ಮೃಗಗಳ ಬೀತಿಯ ನಡುವೆಯೇ ಜೀವದ ಹಂಗು ತೊರೆದುಕಾಡಿನಲ್ಲಿ ನಡೆದು ಹೋಗಿದ್ದಾರೆ.
ಇನ್ನು, ಆಕೆಯ ಹೆರಿಗೆ ನೋವು ಕಾಣಿಸಿಕೊಂಡಾಗ ಆಶಾ ಕಾರ್ಯಕರ್ತೆ ಹಾಗೂ ಹಾಡಿ ಮಂದಿಯ ಸಹಕಾರ ನೀಡಿದ್ದು, ಮಳೆಯಲ್ಲಿ ಕೊಡೆಯ ಆಶ್ರಯದೊಂದಿಗೆ ಹಾಡಿ ಹೊರಗಿನ ಮುಖ್ಯ ರಸ್ತೆವರೆಗೆ ಜೊತೆಗೊಡಿದ್ದಾರೆ.
ಬಳಿಕ ಆಕೆಯನ್ನು ಆಂಬುಲೆನ್ಸ್ ಹತ್ತಿಸಲಾಯಿತು. ಈ ನಂತರ ಆಕೆ ಸರಗೂರು ತಾಲೂಕಿನ ವಿವೇಕಾನಂದ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದುತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Leave a Comment