ಕಾರವಾರ : ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಹೊಸ ಶಿಷ್ಯವೇತನ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಎಸ್.ಎಸ್.ಎಲ್.ಸಿ ಬಳಿಕ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತರ ಕೋರ್ಸ್ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಎಲ್ಲಾ ಮಕ್ಕಳ ಬ್ಯಾಂಕ್ಗಳ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.
ವಿದ್ಯಾನಿಧಿ ಶಿಷ್ಯವೇತನ ನೋಂದವಣಿಗಾಗಿ ಜಾಲತಾಣ https://postmatric.karnataka.gov.in ಸಂಪರ್ಕಿಸಬಹುದಾಗಿದೆ. ಪದವಿಪೂರ್ವ ಪಿಯುಸಿ/ ಐಡಿಐ/ ಡಿಪ್ಲೋಮಾ ಕೋರ್ಸ್ಗೆ ಹುಡುಗರಿಗೆ 2500 ರೂ. ಗಳನ್ನು ನೀಡಲಾಗುವುದು. ಬಿಎ/ಬಿಎಸ್ಸಿ/ ಬಿಕಾಂ ಹಾಗೂ ಎಂಬಿಬಿಎಸ್ /ಬಿಇ/ಬಿಡಿಕ್ ಮತ್ತು ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ಹಾಗೂ ವಿದ್ಯಾರ್ಥಿನಿಯರು ಮತ್ತು ಅನ್ಯಲಿಂಗದವರಿಗೆ 5500 ರೂ. ಇರುತ್ತದೆ. ಎಲ್ ಎಲ್ ಬಿ/ ಪ್ಯಾರಾ ಮೇಡಿಕಲ್ / ಬಿಫಾರ್ಮಾ/ ನಸಿಂಗ್ ಇತ್ಯದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 7500 ರೂ. ವಿದ್ಯಾರ್ಥಿನಿಯರು ಮತ್ತು ಅನ್ಯಲಿಂಗದವರಿಗೆ 8 ಸಾವಿರ ರೂ. ಮೀಸಲಿದ್ದು, ಎಂಬಿಬಿಎಸ್/ಬಿಇ/ಬಿಟಿಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಶಿಷ್ಯವೇತನ ನಿಗದಿಪಡಿಸಿದೆ,
ಶಿಷ್ಯವೇತನ ಪಡೆಲಿಚ್ಛಿಸುವ ವಿದ್ಯಾರ್ಥಿಗಳ ಪೋಷಕರು ರಾಜ್ಯದ ಯಾವುದೇ ಭಾಗದಲ್ಲಿ ಉಳಮೆ/ ಕೃಷಿ ಮಾಡುವಂತಹ ಜಮೀನನ್ನು ತನ್ನ ಹೆಸರಿನಲ್ಲಿ ಹೊಂದಿ. ರೈತರ ಗುರುತಿನ ಸಂಖ್ಯೆ ಎಫ್ಐಡಿ ಹೊಂದಿರಬೇಕು. ಕಾನೂನಿನ ಪ್ರಕಾರ ದತ್ತು ಪಡೆದಿರುವ ಮಕ್ಕಳು ಸೇರಿದಂತೆ ಪೋಷಕ/ಪೋಷಕರ ಜೈವಿಕ ಸಂತತಿಯವರು, ಒಂದು ಪಕ್ಷ ಯಾವುದೇ ಮಕ್ಕಳಿಗೆ ಪೋಷಕ/ ಪೋಷಕರು ಇಲ್ಲದೆ ಇದ್ದ ಸಂದರ್ಭದಲ್ಲಿ ಉಳುಮೆ /ಕೃಷಿ ಮಾಡುವಂತಹ ಜಮೀನನ್ನು ಅವರೇ ಹೊಂದಿರತಕ್ಕದ್ದು,
ಕರ್ನಾಟಕ ರಾಜ್ಯದ ರೈತರ ಮಕ್ಕಳು ಮಾತ್ರ ಈ ಶಿಷ್ಯವೇತನಕ್ಕೆ ಅರ್ಹರಾಗಿದ್ದು, ಮೆರಿಟ್ ಅರ್ಹತಾ ಪರೀಕ್ಷೆ ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್ಯಾಂಕ್ ಇತ್ಯದಿಗಳ ಆಧಾರದ ಮೇಲೆ ಪಡೆಯುವ ಶಿಷ್ಯವೇತನ /ಪ್ರಶಸ್ತಿಯನ್ನು ಪಡೆದಿದ್ದರೂ ಈ ಶಿಷ್ಯವೇತನವನ್ನು ಪಡೆಯಬಹುದು. ತಂದೆ-ತಾಯಿ ಇಬ್ಬರೂ ಈ ಶಿಷ್ಯವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್ ಅಥವಾ ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು. ಕೋರ್ಸ್ನ ಸೆಮಿಸ್ಟರ್ನಲ್ಲಿ ಅಥವಾ ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು,
ಕೋರ್ಸ್ನ ಸೆಮಿಸ್ಟರ್ನಲ್ಲಿ ಅಥವಾ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾವರ್ತನೆಯಾದರೆ ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ ಈ ಶಿಷ್ಯವೇತನವನ್ನು ಯಾವೂದಾದರೂ ಒಂದು ವಿವಿಧ ಕೋರ್ಸ್ಗೆ ಲಭ್ಯವಿರುತ್ತದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment