ಶೃಂಗೇರಿ : ಮೆಣಸೆ ಗ್ರಾ.ಪಂ ವ್ಯಾಪ್ತಿಯ ಗಿಣಕಲ್ ಗ್ರಾಮದ ಕಾಳ್ಯ ಎಂಬಲ್ಲಿ ಹದಿನಾರನೇ ಶತಮಾನಕ್ಕೆ ಸೇರಿದ ವೀರ ಮಾಸ್ತಿಕಲ್ಲನ್ನು ಸಾಹಿತಿ ನ.ಸುರೇಶ ಕಲ್ಕೆರೆ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೈಲು ಅನಂತರಾಮು 185 ಸೆಂ. ಮೀಟರ್ ಎತ್ತರ 65 ಸೆಂ.ಮೀ ಅಗಲವಾಗಿದೆ.
ನಾಲ್ಕು ಪಟ್ಟಿಕೆಗಳನ್ನು ಹೊಂದಿರುವ ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ಬಿಲ್ಲುಬಾಣ ಗುರಾಣಿ ಹಿಡಿದ ಯುದ್ಧ ಮಾಡುತ್ತಿರುವ ಹಾಗೂ ಕಹಳೆ ಹಿಡಿದಿರುವ ಸ್ತಿçÃಯರ ಉಬ್ಬು ಶಿಲ್ಪಗಳಿವೆ. ಆದರೆ ಮೇಲಿನ ಪಟ್ಟಿಕೆಯಲ್ಲಿ ಅಶ್ವದ ಮೇಲೆ ಕತ್ತಿ ಹಿಡಿದು ಕುಳಿತಿರುವ ಸತಿಯ ಉಬ್ಬು ಶಿಲ್ಪವಿದೆ. ಎಡಭಾಗದಲ್ಲಿ ಚಾಮರ ಹಿಡಿದ ಸ್ತಿçÃಯರ ಶಿಲ್ಪ ಕೆತ್ತಲಾಗಿದೆ.
ಮಧ್ಯದ ಪಟ್ಟಿಕೆಯಲ್ಲಿ ಪೀಠದ ಮೇಲೆ ಕುಳಿತಿರುವ ಸತಿಯ ಮತ್ತು ಆಕೆಯ ಪತಿಯ ಶಿಲ್ಪವನ್ನು ಕತ್ತಲಾಗಿದೆ. ಪಟ್ಟಿಕೆಯ ಮೇಲ್ಭಾಗದಲ್ಲಿ ಸೂರ್ಯಚಂದ್ರರ ಉಬ್ಬು ಕೆತ್ತನೆಯಿದೆ. ಇಂತಹ ಇತಿಹಾಸವನ್ನು ತಿಳಿಸುವ ಶಿಲ್ಪಗಳನ್ನು ಉಳಿಸುವ ಅಗತ್ಯವಿದೆ. ಕ್ಷೇತ್ರ ಕಾರ್ಯದಲ್ಲಿ ಶೈಲ ಅನಂತರಾಮು ಅವರಿಗೆ ಕೃಷಿಕರಾದ ತಮ್ಮಪ್ಪಗೌಡರು ಹಾಗೂ ಶಮಂತ ಕುಂಚೇಬೈಲು ಸಹಕರಿಸಿರುತ್ತಾರೆ.
Leave a Comment