ತುಮಕೂರ : ನಾಗವಲ್ಲಿಯ ಕೃಷಿ ಪತ್ತಿನ ಸಹಕಾರ ಸಂಘದ ಕಾವಲುಗಾರರನನ್ನು ದುಷ್ಕರ್ಮಿಗಳು ಕೊಲೆ ಮಾಡಿ, 2.60ಲಕ್ಷ ರೂ. ನಗದು ದೋಚಿದ್ದಾರೆ.
ಹೆಬ್ಬೂರಿನ ಸಿದ್ಧಪ್ಪ (55) ಮೃತ ಕಾವಲುಗಾರ. ಈತ 7 ತಿಂಗಳಷ್ಟೆ ಕೆಲಸಕ್ಕೆ ಸೇರಿದ್ದು, ಭಾನುವಾರ ರಾತ್ರಿ 8.30 ಕ್ಕೆ ಕರ್ತವುಕ್ಕೆ ಹಾಜರಾಗಿದ್ದರು. 2 ದಿನದಿಂದ ಸೊಸೈಟಿಗೆ ರಜೆ ಇರುವುದನ್ನು ಗಮನಿಸಿದ್ದ ಕಳ್ಳರು ಭಾನುವಾರ ತಡರಾತ್ರಿ ಸಿದ್ಧಪ್ಪನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿ.ಸಿ ಕ್ಯಾಮರಾಗಳನ್ನು ಧ್ವಂಸಗೊಳಿಸಿ ಕಳವು ಮಾಡಿದ್ದಾರೆ.
ಸೋಮವಾರ ಬೆಳ್ಳಿಗೆ ಸಿಬ್ಬಂದಿ ಸೊಸೈಟಿಗೆ ಬಂದ ಅಧಿಕಾರಿಗಳು ಕೊಲೆ ಹಾಗೂ ದರೋಡೆಯಾಗಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಬೆರಳಚ್ಚು ತಜ್ಞರು, ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಹೆಬ್ಬೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾವಲು ಗಾರನನ್ನು ಕೊಲೆ ಮಾಡಿ, ನಗದು ದೋಚಿರುವ ಆರೋಪಿಗಳ ಪತ್ತಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಶ್ರಿಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ತಿಳಿಸಿದ್ದಾರೆ.
Leave a Comment