ಮೈಸೂರು : ಆರೋಗ್ಯ ಇಲಾಖೆ ಸಿಬ್ಬಂದಿ ಬಲವಂತಾಗಿ ಕೋವಿಡ್ ಲಸಿಕೆ ನೀಡಿದ ಬಳಿಕ ಅಸ್ವಸ್ಥರಾದ ವ್ಯಕ್ತಿಯೊಬ್ಬರು ಚಿಕಿತ್ಸ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
39 ವರ್ಷ ವಯಸ್ಸಿನ ಸುರೇಶ್ ಮೃತಪಟ್ಟವರು. ಇವರು ಕಳೆದ 12 ರಂದು ಮನೆಯಲ್ಲಿ ಮಲಗಿದ್ದಾಗ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇಲ್ಲ ಎಂದಾಗ ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ನೀಡಿದ್ದಾರೆ. ಇದಾದ ಎರಡೇ ನಿಮಿಷಗಳಲ್ಲಿ ವ್ಯಕ್ತಿ ಅಸ್ವಸ್ಥನಾಗಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದ ಹಿನ್ನಲೆಯಲ್ಲಿ ಸಿಬ್ಬಂದಿ ಭಯಗೊಂಡಿದ್ದಾರೆ.
ಬಳಿಕ ಮೂಗು ಮತ್ತು ಬಾಯಿಯಿಂದ ರಕ್ತ ಬರಲಾರಂಭಿಸಿದಾಗ ಸಿಬ್ಬಂದಿ ಕೂಡಲೇ ಆಟೋ ಮೂಲಕ ಅಸ್ವಸ್ಥನನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ತುರ್ತುಘಟಕಕ್ಕೆ ದಾಖಲಿಸಿಕೊಂಡ ವೈದ್ಯರು ಎರಡು ದಿನ ಚಿಕಿತ್ಸೆ ನೀಡಿದರೂ ವ್ಯಕ್ತಿ ಬದುಕುಳಿಯಲಿಲ್ಲ.
ಸುಂದರ್ ಸಾವಿಗೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷö್ಯವೇ ಕಾರಣ ಎಂದು ಆರೋಪಿಸಿ ಮೃತನ ಕುಟುಂಬಸ್ಥರು, ಸಂಘಟನೆಗಳ ಕರ್ಯಕರ್ತರು ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಡಿಎಚ್ಓ ಕೆ.ಎಚ್. ಪ್ರಸಾದ್ ಮನವೊಲಿಸಿದರೂ ಪ್ರತಿಭಟನೆ ನಡೆಸಿದರು.
ಡಿಎಚ್ಓ ಕೆ.ಎಚ್. ಪ್ರಸಾದ್ ಮನವೊಲಿಸಿದರೂ ಪ್ರತಿಭಟನೆ ನಿಲ್ಲಲಿಲ್ಲ. ಬಳಿಕೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಸ್ಥಳಕ್ಕಾಗಮಿಸಿ, ಮನವಿಪತ್ರ ಸ್ವೀಕರಿಸಿದರು. ಅಲ್ಲದೆ, ಸೂಕ್ತ ಪ್ರಕ್ರಿಯೆ ಅನುಸರಿಸಿ ಪರಿಹಾರಧನ ಒದಗಿಸುವುದಾಗಿ ಭರವಸೆ ನೀಡಿದ ಬಳಿಕ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಿತು.
Leave a Comment