ಬೆಂಗಳೂರು : ದೇಶದ ಆರ್ಥಿಕತೆಗೆ ಮಾರಕವಾಗದೇ ನಿಯಂತ್ರಿತ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ಹೊಸ ಕಾಯ್ದೆ ಜಾರಿಗೊಳಿಸಲು ಶೀಘ್ರವೇ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರಿಗೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅಕ್ಟೋಬರ್ 19 ರಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕ್ರಿಪ್ರೊಕರೆನ್ಸಿ ಅಕ್ರಮ ವಹಿವಾಟಿನ ಕುರಿತಂತೆ ಬರೆದಿದ್ದ ಸುದೀರ್ಘ ಪತ್ರ ಕ್ಕೆ ಪ್ರತಿಕ್ರಿಯೆ ಸಹಿತ ಪ್ರತಿಯಾಗಿ ಪತ್ರ ಬರೆದಿದೆ.
ರಾಜ್ಯದಲ್ಲಿ ಬಹುಕೋಟಿ ಬಿಟ್ಕಾಯಿನ್ ಹಗರಣ ನಡೆದಿರುವ ಬಗೆಗೆ ಸಂಯುಕ್ತ ಕರ್ನಾಟಕ ವರದಿ ಪ್ರಕಟಿಸಿದ ದಿನದಂದೇ ಸಾಮಾಜಿಕ ಕಾರ್ಯತರ್ಕ ಭಾರದ್ವಾಜ್ ಕೇಂದ್ರ ಸರ್ಕಾರ ಗಮನ ಸೆಳೆದು, ಕ್ರಿಪ್ರೊಕರೆನ್ಸಿ ವಹಿವಾಟಿಗೆ ಕಡಿವಾಣ ಹೇರುವಂತೆ ಒತ್ತಾಯಿಸಿದ್ದರು.
ಇದಕ್ಕೆ ಉತ್ತರ ನೀಡಿರುವ ಹಣಕಾಸು ಇಲಾಖೆಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಆಂತರಿಕ ಸಚಿವಾಲಯದ ಉನ್ನತಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಕ್ರಿಪ್ಟೋ ಕರೆನ್ಸಿ ವಹಿವಾಟಿನ ಸಾದಕಬಾಧಕಗಳನ್ನು ಅಧ್ಯಯನ ನಡೆಸಿ ವರದಿ ನೀಡಲಿದೆ.
ಇದರ ಜತೆಗೆ ಬ್ಲಾಕ್ಚೈನ್ ಟೆಕ್ನಾಲಜಿ ಬಳಕೆ, ಡಿಜಿಟಲ್ ಕರೆನ್ಸಿಯ ಮೇಲೆ ನಿಯಂತ್ರಿತ ವಹಿವಾಟಿನ ನಿಯಮ ಸೇರಿದಂತೆ ಎಲ್ಲ ಬಗೆಯ ಸಾಧ್ಯತೆಗಳನ್ನು ಪರಿಶೀಳಿಸಲಾಗುತ್ತಿದೆ. ಅದಷ್ಟು ಶೀಘ್ರ ಈ ಬಗ್ಗೆ ಸೂಕ್ತ ಕಾನೂನು ಅನುಷ್ಠಾನಗೊಳಿಸಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Leave a Comment