ಕಾರವಾರ : ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ಜಿಲ್ಲೆಯಲ್ಲಿ ಕಾಯಂ ವಾಸಿಸುತ್ತಿರುವ ಮತೀಯ ಅಲ್ಪಸಂಖ್ಯಾತರಿAದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಪಂಗಡಕ್ಕೆ ಸೇರಿದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. 2021 – 22 ನೇ ಸಾಲಿನಲ್ಲಿಅನುಷ್ಠಾನಗೊಳಿಸಲು ಯೋಜನೆಗಳು, ಸಣ್ಣ (ಮೈಕ್ರೋ) ಸಾಲ ಮತ್ತು ಸಹಾಯಧನ ಯೋಜನೆ (ಕನಿಷ್ಠ 18 ವರ್ಷ, ಗರಿಷ್ಠ 45 ವರ್ಷ) ಗಂಗಾ ಕಲ್ಯಾಣ ಯೋಜನೆ (ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ) ಮೈಕ್ರೋ ವೈಯಕ್ತಿಕ (ಸಣ್ಣ) ಬಿಪಿಎಲ್/ ಅಂತ್ಯೋದಯ ಕಾಡ್ ð ಹೊಂದಿರುವ ಮಹಿಳೆಯರಿಗೆ ಮಾತ್ರ (ಕನಿಷ್ಠ 25 ವರ್ಷ, ಗರಿಷ್ಠ 50 ವರ್ಷ), ಟ್ಯಾಕ್ಸಿ ಗೊಡ್ಸ್/ ಪ್ಯಾಸೆಂಜರ್ ಆಟೋರಿಕ್ಷಾ ವಾಹನ ಖರೀದಸಲು ಸಹಾಯಧನ ಯೋಜನೆ (ಕನಿಷ್ಠ 18 ವರ್ಷ, ಗರಿಷ್ಠ 45 ವರ್ಷ) ಹಾಗೂ ಶ್ರಮಶಕ್ತಿ ಸಾಲದ ಯೋಜನೆ (ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ) ಗಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿದದಾರು ಜಿಲ್ಲೆಯ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ನಗರ ವಾಸಿಗಳಿಗೆ 1.03 ಲಕ್ಷ ಹಾಗೂ ಗ್ರಾಮೀಣ ನಿವಾಸಿಗಳಿಗೆ 96 ಸಾವಿರ ರೂ. ಮಿತಿಯಲ್ಲಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಯಹಶೀಲ್ದಾರರಿಂದ ಪಡೆದೆರಿಬೇಕು. ಆಧಾರ್ ಕಾರ್ಡ್ (ಬ್ಯಾಂಕ್ ಖಾತೆಗೆ ಜೋಡಣೆ (ಲಿಂಕ್) ಮಾಡಿರಬೇಕು. ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವುದು ಕಡ್ಡಾಯವಾಗಿರುತ್ತದೆ.
ಅರ್ಜಿಯ ಜೊತೆಗೆ ಬ್ಯಾಂಕ್ ಖಾತೆಯ ನಕಲು ಪ್ರತಿ ಲಗತ್ತಿಸಬೇಕು. ಆರ್ಟಿಒದಿಂದ ನೀಡಲ್ಪಟ್ಟ ಸಂಬAಧಪಟ್ಟ ವಾಹನ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು. ಕುಟುಂಬದ ಸದಸ್ಯರು ಸಾರಿಗೆ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿ ಸಾಲ ಸೌಲಭ್ಯ ಪಡೆದಿರಬಾರದು. ಈ ಹಿಂದೆ ನಿಗಮದ ಯೋಜನೆಗಳಲ್ಲಿ ಸೌಲಭ್ಯ ಪಡೆದವರು ಅಥವಾ ಅವರ ಕುಟುಂಬದ ಅದಸ್ಯರು ಅರ್ಜಿ ಸಲ್ಲಿಸಲು ಅನರ್ಹನಾಗಿರುತ್ತಾರೆ.
ನಿಗದಿತ ಅರ್ಜಿ ನಮೂನೆಯನ್ನು ಡಿಸೆಂಬರ್ 15 ರೊಳಗಾಗಿ https://kmdconline.karnataka.gov.in/Portal/home ನಲ್ಲಿ ಸಲ್ಲಿಸಿ ಭರ್ತಿ ಮಾಡಿ. ಅರ್ಜಿಯೊಂದಿಗೆ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕರ ಕಛೇರಿ 1 ನೇ ಮಹಡಿ, ವಾಂ ಮಂಜಿಲ್, ಹೈಚರ್ಚೆ, ರಸ್ತೆ ಕಾರವಾರ – 581301 ವಿಳಾಸಕ್ಕೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ದೂರವಾಣಿ ಸಂಖ್ಯೆ : 08382 – 221 180 ಗೆ ಸಂಪರ್ಕಿಸಬಹುದಾಗಿದೆ. ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment