ಭಟ್ಕಳ : ಗುರುವಾರ ಸಂಜೆ ಬೈಕ್ನಲ್ಲಿ ಹಿಂಬಾಲಿಸಿಕೊAಡು ಬಂದ ಆರು ಮಂದಿ ಮುಸುಕುಧಾರಿಗಳು ಇಲ್ಲಿನ ನ್ಯೂಸ್ ಪೋರ್ಟಲ್ ಒಂದರ ವರದಿಗಾರನ ಮೇಲೆ ನಡೆಸಿದ ಹಲ್ಲೆಗೆ ಸಂಬAಧಸಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ರಿಕ್ರಿಯೇಷನ್ ಕ್ಲಬ್ ಮಾಲೀಕನನ್ನು ಬಂಧಿಸಲಾಗಿದೆ.
ಕೆಲವು ದಿನಗಳ ಹಿಂದೆ ತಾಲೂಕಿನಲ್ಲಿ ನಡೆಯುತ್ತಿರುವ ರಿಕ್ರಿಯೇಷನ್ ಕ್ಲಬ್ ದಂಧೆಗಳ ಕುರಿತು “ಕರಾವಳಿ ಸಮಾಚಾರ’ ಎಂಬ ನ್ಯೂಸ್ ಪೋರ್ಟಲ್ನಲ್ಲಿ ರಾಘು (ಅರ್ಜುನ್) ಮಲ್ಯ ಎಂಬ ವರದಿಗಾರ ವರದಿ ಪ್ರಕಟಿಸಿದ್ದ. ಇವರಿಂದಾಗಿ ರಿಕ್ರಿಯೇಶನ್ ಕ್ಲಬ್ ನಡೆಸುತ್ತಿದ್ದ ಬೆಳಕೆಯ ಮಹಾದೇವ ನಾಯ್ಕ ಆಕ್ರೋಶಗೊಂಡಿದ್ದರು.
ಗುರುವಾರ ಸಂಜೆ ಸುಮಾರು 6 ಗಂಟೆಗೆ ಮಹಾದೇವ ತನ್ನ ಸಹಚರರ ಜೊತೆಗೆ ಬೈಕ್ ನಲ್ಲಿ ಬಂದು ರೀಪು ಹಾಗೂ ಕಬ್ಬಿಣದ ರಾಡುಗಳಿಂದ ವರದಿಗಾರನನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದ್ದೆ ಎನ್ನಲಾಗಿದೆ. ಗಂಭಿರಗೊAಡಿದ್ದ ಅರ್ಜುನನನ್ನು ಸ್ನೇಹೀತರು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ತಕ್ಷಣವೇ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಸರ್ಕಾರಿ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಸಹಕರಿಸಿವೆ. ಗುರುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಆರೋಪಿ ಮಹಾದೇವ ನಾಯ್ಕ ಅನಾರೋಗ್ಯದ ಕಾರಣದಿಂದ ಭಟ್ಟಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಸಂಜೆ ವೇಳೆ ಇದ್ದಕ್ಕಿಂತೆ ಆಸ್ಪತ್ರೆಯ ಅನುಮತಿ ಪಡೆಯದೇ ಹೊರಹೋಗಿದ್ದ ಅಲ್ಲದೇ ಅರ್ಜುನ್ ಮೇಲೆ ಹಲ್ಲೆ ನಡೆದು ಆತನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತರುವ ಕೆಲವೇ ಹೊತ್ತಿಗೆ ಮುನ್ನ ಆರೋಪಿ ಮಾಹಾದೇವ ನಾಯ್ಕ ಆಸ್ಪತ್ರೆಗೆ ಬಂದು ಬೆಡ್ ಮೇಲೆ ಮಲಗಿದ್ದಾನೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಶೀಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಪ್ರಮುಖ ಆರೋಪಿ ಮಾಹಾದೇವ ನಾಯ್ಕ ಎಂಬುದು ತಿಳಿಯುತ್ತಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಲ್ಲೆ ನಡೆಸಿದ ಇನ್ನಿತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
Leave a Comment