ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ದಾಂಡೇಲಿಯ ಅಭ್ಯರ್ಥಿ ಬಿ.ಎನ್. ವಾಸರೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಶೇ.59.2ರಷ್ಟು ಮತದಾನವಾಗಿದ್ದು ಒಟ್ಟು 1,897 ಮತಗಳನ್ನು ಪಡೆದಿರುವ ಅವರು 324 ಮತಗಳನ್ನು ಪಡೆದಿರುವ ವೇಣುಗೋಪಾಲ ಮದ್ಗೂಣಿ ವಿರುದ್ಧ 1573 ಮತಗಳ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 4,747 ಮತಗಳಿದ್ದು ಅದರಲ್ಲಿ 2810 ಮತಗಳು ಚಲಾವಣೆಗೊಂಡಿದ್ದವು. ಕಳೆದ ಭಾರಿ ಅರವಿಂದ ಕರ್ಕಿಕೋಡಿ ವಿರುದ್ಧ ಕೇವಲ 7 ಮತಗಳ ಅಂತರದಿAದ ಕಸಾಪ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಈ ಭಾರಿ ದಾಖಲೆಯ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಉಳಿದಂತೆ ಕೃಷ್ಣಮೂರ್ತಿ ಹೆಬ್ಬಾರ್ 155, ರಾಘವೇಂದ್ರ ಗಡೆಪ್ಪನವರ್ 57, ಶಾರದಾ ಭಟ್ಟ 61 ಮತಗಳನ್ನು ಪಡೆದುಕೊಂಡಿದ್ದು ಒಟ್ಟೂ 21 ಮತಗಳು ತಿರಸ್ಕಾರಗೊಂಡಿದೆ.
Leave a Comment