ದಾವಣಗೆರೆ : ಕೆ ಎಸ್ಆರ್ಟಿಸಿ ನಗರ ಸಾರಿಗೆ ಬಸ್ ಚಾಲಕನ ಅಜಾಗರೂಕತೆಯಿಂದ ಡಿಪ್ಲೋಮಾ ವಿದ್ಯಾರ್ಥಿ ಕಾಲು ಬಸ್ ಬಾಗಿಲಿನಲ್ಲಿ ಸಿಲುಕಿ ಎಡಗಾಲಿನ ಐದೂ ಬೆರಳು ತುಂಡಾದ ಘಡನೆ ನಗರದ ಪಿಬಿ ರಸ್ತೆಯ ಡಿಸಿಎ ಮೇಲ್ಸೇತುವೆ ಬಳಿ ಶುಕ್ರವಾರ ನಡೆದಿದೆ.
ವಿವೇಕಾನಂದ ಬಡಾವಣೆ ಬಾಪೂಜಿ ಎಂಜಿನಿಯರಿAಗ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೋಮಾ ಓದುತ್ತಿರುವ ಶರತ್ ಗೌಡ ಎನ್.ಎಸ್. (17) ಗಾಯಗೊಂಡ ವಿದ್ಯಾರ್ಥಿ. ಜಯನಗರದಲ್ಲಿ ವಾಸವಿರುವ ಜಗಳೂರು ತಾಲೂಕಿನ ನಿಬಗೂರು ಗ್ರಾಮದ ಶರತ್ ಗೌಡ, ಶುಕ್ರವಾರ ಬೆಳ್ಳಗೆ ಜಯನಗರದಿಂದ ಕಾಲೇಜಿಗೆ ಹೋಗಲು ಸರಕಾರಿ ಬಸ್ ಹತ್ತಿದ್ದಾರೆ. ಬಸ್ ಡಿಸಿಎ ಮೇಲ್ಸೇತುವೆ ಬಳಿ ಬಂದಿದ್ದು, ಶರತ್ ಬಸ್ನಿಂದ ಇಳಿಯುವಾಗ ಚಾಲಕ ಬಸ್ ಮುಂದೆ ಬಿಟ್ಟಿದ್ದಾನೆ.
ಈ ವೇಳೆ ಆಯತಪ್ಪಿ ವಿದ್ಯಾರ್ಥಿ ಕಳೆದ ಬಿದ್ದಿದ್ದು, ಆತನು ಕಾಲು ಬಸ್ ಡೋರ್ ಸಂದಿಯಲ್ಲಿ ಸಿಲುಕಿ ಎಡಗಾಲಿನ ಐದು ಬೆರಳುಗಳು ತುಂಡಾಗಿವೆ. ಕೂಡಲೇ ಬಸ್ ನಿರ್ವಾಹಕ ಅಲ್ಲೇ ಹೊಗುತ್ತಿದ್ದ ಕಾರಲ್ಲಿ ವಿದ್ಯಾರ್ಥಿಯನ್ನು ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಡನೆ ಕುರಿತು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿರುವ ಗಾಯಾಳು ವಿದ್ಯಾರ್ಥಿ ತಂದೆ ಸುರೇಶ್ ಎನ್ . ಜಿ ಬಸ್ ಚಾಲಕನ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
Leave a Comment