ಮುರ್ಡೇಶ್ವರದ ಬೃಹತ್ ಈಶ್ವರ ಮೂರ್ತಿಯನ್ನು ಉಗ್ರ ಸಂಘಟನೆಯ ದಿ ವಾಟ್ಸ್ ಆಫ್ ಹಿಂದ್ ಎಂಬ ಪತ್ರಿಕೆಯಲ್ಲಿ ವಿರೂಪಗೊಳಿಸಿ ಪ್ರಕಟಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮುರ್ಡೇಶ್ವರದ ಆರ್.ಎನ್.ಎಸ್. ಗ್ರೂಪ್ನ ಜನರಲ್ ಮ್ಯಾನೇಜರ್ ಶ್ರೀಪರಿ ಕೆ. ಶ್ರೀನಿವಾಸಮೂರ್ತಿ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಇದು ಸಾಮಾಜಿಕ ಜಾಲ ತಾಣದಲ್ಲಿ ಎಲ್ಲ ಕಡೆಗಳಲ್ಲಿಯೂ ಹರಿದಾಡುತ್ತಿದ್ದು ಶಿವನ ಮೂರ್ತಿಯ ಶಿರಚ್ಛೇಧನ ಮಾಡಿದ ರೀತಿಯಲ್ಲಿ ಫೋಟೋವನ್ನು ಹಾಕಿ ಅದರ ಮೇಲೆ ಐ.ಎಸ್.ಐ.ಎಸ್. ಧ್ವಜವನ್ನು ನೆಟ್ಟು ಒಟ್ಟಾರೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಾಗೂ ಕೋಮು ಭಾವನೆಗಳನ್ನು ಕೆರಳಿಸುವ ಕೃತ್ಯವನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ.
ಇದರಿಂದ ಹಿಂದೂ ಸಮುದಾಯದ ಮತೀಯ ಭಾವನೆಗೆ ಧಕ್ಕೆಯಾಗಿದ್ದು ಉದ್ದೇಶಪೂರ್ವಕವಾಗಿ ಅಪಮಾನಗೊಳಿಸುವ, ದ್ವೇಷ ಭಾವನೆಯನ್ನು ಹುಟ್ಟು ಹಾಕುವ ಕೆಲಸವನ್ನು ಮಾಡಿದ್ದು ಈ ರೀತಿಯ ಕೃತ್ಯವನ್ನು ಮಾಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ. ಮುರುಡೇಶ್ವರ ಠಾಣೆಯ ಠಾಣಾಧಿಕಾರಿ ಮಹಮ್ಮದ್ ಕಾಸಿಂ ಎಂ. ಶೇಖ್ ಅವರು ದೂರನ್ನು ಸ್ವೀಕರಿಸಿದ್ದಾರೆ
Leave a Comment