ಹೊನ್ನಾವರ : ರಾಷ್ಟಿçÃಯ ಹೆದ್ದಾರಿ 69ರ ಮೂರುಕಟ್ಟೆ ಸಮೀಪ ಕಾರು ಚಾಲಕನ ಅಜಾಗರೂಕ ಚಾಲನೆಯಿಂದ ಬೈಕ್ಗೆ ಡಿಕ್ಕಿಪಡಿಸಿ, ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಆರೋಪಿತ ಕಾರು ಚಾಲಕ ಬೆಂಗಳೂರು ಮೂಲದ ನಿಖಿಲ ಉಭಯಕ, ಹೊನ್ನಾವರ ಕಡೆಯಿಂದ ಗೇರುಸೊಪ್ಪಾ ಕಡೆಗೆ ತಮ್ಮ ಕಾರನ್ನು ಅತೀವೇಗವಾಗಿ ನಿಷ್ಕಾಳಜಿತನದಿಂದ ರಸ್ತೆಯ ಬಲಕ್ಕೆ ಚಲಾಯಿಸಿ, ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬೈಕ್ ಸವಾರ ಮಂಜುನಾಥ ಭಟ್, ಹಿಂಬದಿ ಸಂವಾರ ಸುಬ್ರಹ್ಮಣ್ಯ ಭಟ್ ಬೈಕ್ ಸಮೇತ ರಸ್ತೆಯಲ್ಲಿ ಬಿದ್ದು ಗಂಭೀರ ಗಾಯವಾಗಿದೆ. ಗಾಯಾಳುಗಳು ತಾಲೂಕಿನ ಬೆರೊಳ್ಳಿ ಮೂಲದವರಾಗಿದ್ದಾರೆ.
ಘಟನೆಯಲ್ಲಿ ಕಾರು ಮತ್ತು ಬೈಕ್ ಎರಡೂ ಜಖಂಗೊAಡಿದೆ. ಕಾರು ಚಾಲಕ ನಿಖಿಲ್ ಉಭಯಕ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಜುನಾಥ ಹೆಗಡೆ ಎನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Leave a Comment