ಕುಮಟಾ : ಪತ್ನಿಯ ಜೊತೆ ಬೈಕ್ನಲ್ಲಿ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬAಧಸಿ ಕುಮಟಾ ಪೊಲೀಸರು ಬುಧವಾರ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣಕ್ಕೆ ಸಂಭಧಪಟ್ಟAತೆ ಇಬ್ಬರು ತಲೆಮರಿಸಿಕೊಂಡಿದ್ದು, ಒಬ್ಬನನ್ನು ಮಾಸೂರು ಕ್ರಾಸ್ನ ಶಶಿಧರ ಹರಿಕಂತ್ರ ಎಂದು ಗುರುತಿಸಲಾಗಿದೆ. ಪಿಎಸ್ಐ ರವಿ ಗುಡ್ಡಿ ಮಾಹಿತಿ ನೀಡಿದ್ದಾರೆ.
ನನ್ನ ಪತ್ನಿಯ ಜೊತೆ ಬೈಕ್ನಲ್ಲಿ ಕಾಗಾಲದಿಂದ ಕುಮಟಾಕ್ಕೆ ಹೋಗುವಾಗ ಹಳಕಾರಿ ರಸ್ತೆಯಲ್ಲಿ ಇಬ್ಬರು ನನ್ನ ಬೈಕ್ ಎದುರು ಅಡ್ಡಾದಿಡ್ಡಿ ಬೈಕ್ ಓಡಿಸಿ ತೊಂದರೆ ಕೊಟ್ಟಾಗ, ಯಾಕೆ ತೊಂದರೆ ಕೋಡುತ್ತೀರಿ ಎಂದು ಕೇಳಿದ ಅಷ್ಟಕೇ ಇಬ್ಬರೂ ಬಂದು ನನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಅವರ ಬೈಕ್ ನಂಬರನ್ನು ಅಧರಿಸಿ ದೂರು ನೀಡಿದ್ದೇನೆ. ಎಂದು ಹಲ್ಲೆಗೊಳಗಾದ ತಾಲೂಕಿನ ಕಾಗಾಲದ ಸಾರಿಗೆ ನಿಗಮದ ನಿರ್ವಾಹಕ ಪರಮೇಶ್ವರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.
Leave a Comment