ಈ ಜಗತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರುವುದು ವಿರಳ. ಅಂದಹಾಗೆ ಇಲ್ಲೊಬ್ಬಳು ಮಗಳು ವಿಲಾಸಿ ಜೀವನ ನಡೆಸುವ ಉದ್ದೇಶದಿಂದ ನಡುರಸ್ತೆಯಲ್ಲೇ ಹೆತ್ತ ತಾಯಿಯನ್ನೇ ಕೊಂದು ಜೈಲಿಗೆ ಸೇರಿದ್ದಾಳೆ.
ಮೊನ್ನೆ ಹೂಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ ಅರ್ಚನಾ ರೆಡ್ಡಿ ಎಂಬ ಮಹಿಳೆಯ ಕೊಲೆ ಹಿಂದೆ ಮಗಳ ಯುವಿಕಾರೆಡ್ಡಿ ನೆರಳು ಇರುವುದು ಪೊಲೀಸರು ವಿಚಾರಣೆಯಿಂದ ತಿಳಿದುಬಂದಿದೆ. ಇದೇ ಪ್ರಕರಣದಲ್ಲಿ ಅರ್ಚನಾ ಪತಿ ನವೀನ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.
ಡಿ. 27 ರಂದು ಜಿಗಣಿ ಪುರ ಸಭೆಗೆ ಮತದಾನಕ್ಕೆ ತೆರಳಿದ್ದ ಅರ್ಚನಾರೆಡ್ಡಿ ರ್ರಾತಿ 11 ಗಂಟೆ ಯಲ್ಲಿ ತಾವು ವಾಸವಿದ್ದ ಬೆಳ್ಳಂದೊರಿಗೆ ವಾಪಸ್ಸಾಗುತ್ತಿದ್ದರು. ಇವರನ್ನು ಹಿಂಬಾಲಿಸಿ ಕೊಂಡು ಬಂದ ಆರೋಪಿಗಳು ಹೊಸರೋಡ್ ಜಂಕ್ಷನ್ ಬಳಿಯ ರಸ್ತೆಯಲ್ಲಿ ಬರುತ್ತಿದ್ದಂತೆ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಹೊಡೆದು, ಅರ್ಚನಾ ರೆಡ್ಡಿಗೆ ಮೇಲೆ ಮಾರಕಾಸ್ತçಗಳಿಂದ ಭೀಕರ ವಾಗಿ ಹಲ್ಲೇ ಮಾಡಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡ ಅರ್ಚನಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದರು.
ದಾಳಿಯ ಸಂದರ್ಭದಲ್ಲಿ ಅರ್ಚನಾ ಅವರೊಂದಿಗೆ ಇದ್ದ ಮಗ ಹಾಗೂ ಚಾಲಕ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಎಲೆಕ್ಟಾçನಿಕ್ ಸಿಟಿ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ಪುಟೇಜ್ಗಳನ್ನು ಪರಿಶೀಲಿಸಿ ಮೊದಲು 5 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಗಳು ಯುವಿಕಾರೆಡ್ಡಿ, ಪತಿ ನವೀನ್ ಸೇರಿದಂತೆ ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
Leave a Comment