ಹೋನ್ನಾವರ : ತಾಲೂಕಿನ ಕರ್ಕಿನಾಕಾ ಸಮೀಪ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಕೆಲ ಕಾಲ ಸುತ್ತಮುತ್ತಲಿನವರಿಗೆ ಆತಂಕಕ್ಕೆ ಕಾರಣವಾಯಿತು.
ಮಂಗಳೂರಿನಿAದ ಹೊಸಪೇಟೆಗೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ನಾಕಾ ಹತ್ತಿರ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿತ್ತು. ಪಲ್ಟಿಯಾದ ರಭಸಕ್ಕೆ ವಾಹನ ಒಂದು ಬದಿಯಲ್ಲಿ ಜಖಂ ಆಗಿ ಡೀಸೆಲ್ ಸೋರಿಕೆ ಯಾಗಿತ್ತಿತ್ತು. ಇದರಿಂದ ಸಮೀಪದ ಅಂಗಡಿ ಮುಂಗಟ್ಟುಗಳು ಹಾಗೂ ಮನೆಯವರು ಕೆಲ ಸಮಯ ಆತಂಕಕ್ಕೆ ಒಳಗಾದರು.
ಕೊಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತ ಸಂಭವಿಸಿದAತೆ ಜಾಗೃತೆವಹಿಸಿದರು. ಟ್ಯಾಂಕರ್ ಚಾಲಕ ಹನುಮೇ ಗೌಡ ಯಾವುದೇ ಪ್ರಾಣಾಪಯವಿಲ್ಲದೇ ಪಾರದರು. ಹೆದ್ದಾರಿ ಪಕ್ಕ ಬಿದ್ದಿರುದರಿಂದ ಟ್ಯಾಂಕರ್ ಮೇಲೆತ್ತುವ ಸಂದರ್ಭದಲ್ಲಿ ಕೆಲ ಸಮಯ ಟ್ರಾಫಿಕ್ ಸಮಸ್ಯೆ ಎದುರಾಯಿತು.
ನಂತರ ಪೊಲೀಸ್ ಇಲಾಖೆಯವರು ಪರಿಸ್ಥಿತಿ ತಿಳಿಗೊಳಿಸಿದರು. ಈ ಸಂಭದ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment