ಹುಬ್ಬಳ್ಳಿ : ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದವರು ವಿದ್ಯತ್ ದರ ಹೆಚ್ಚಳ ಕುರಿತು ಸಾರ್ವಜನಿಕರಿಂದ ಅಕ್ಷೇಪಣೆ ಅರ್ಜಿಗಳನ್ನು ಕೋರಿರುವುದನ್ನು ನೋಡಿದರೆ ಮತ್ತೆ ವಿದ್ಯತ್ ದರ ಏರಿಸುವ ತಯಾರಿ ಮಾಡಿಕೊಂಡAತಿದೆ.
ವಿದ್ಯತ್ ದರ ಏರಿಕೆ ಮಾಡದೆ, ಈಗಿರುವ ದರವನ್ನೇ ಮುಂದುವರೆಸಿಕೊAಡು ಹೋಗಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ. ಈ ಕುರಿತು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಈಗಾಗಲೇ ಕೋವಿಡ್ – 19 ಲಾಕ್ ಡೌನ್ ಹಿನ್ನಲೆಯಲ್ಲಿ ಬಹಳಷ್ಟು ಉದ್ದಿಮೆಗಳು ಈವರೆಗೂ ಕೂಡ ನಷ್ಟ ಅನುಭವಿಸುತ್ತಲೇ ಇವೆ.
ಆದರೆ ಪ್ರತಿ ವರ್ಷ ವಿದ್ಯತ್ ದರ ಹೆಚ್ಚಳಮಾಡುವ ಪರಿಪಾಠ ಮುಂದುವರೆದಿದೆ. ಹೆಸ್ಕಾಂ ಕಂಪನಿಗಳು ಕಡಿಮೆ ದರದಲ್ಲಿ ವಿದ್ಯತ್ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಸರಬರಾಜು ಮಾಡುವುದನ್ನು ಸಂಸ್ಥೆ ಆಕ್ಷೇಪಿಸುತ್ತಾ ಬಂದಿದೆ.
ವಿದ್ಯತ್ ಸರಬರಾಜು ಕಂಪನಿಗಳಲ್ಲಿ ವಿದ್ಯತ್ ಸೋರಿಕೆ, ಆಡಳಿತಾತ್ಮಕ ವೆಚ್ಚವನ್ನು ತಗ್ಗಿಸಿದಲ್ಲಿ ದರ ಹೆಚ್ಚಿಸುವ ಪ್ರಮೇಯವೇ ಬರುವುದಿಲ್ಲ. ಬಹಳಷ್ಟು ರಾಜ್ಯದಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿದ್ಯತ್ ಸರಬರಾಜು ಕಂಪನಿಗಳು ವಿದ್ಯತ್ ಒದಗಿಸುತ್ತವೆ. ವಿದ್ಯತ್ ದರ ಹೆಚ್ಚಿಸುವ ಒದಲಾಗಿ ಸಾರ್ವಜನಿಕರಿಗೆ ಹಾಗೂ ಉದ್ದಿಮೇದಾರರಿಗೆ ಸೌರ ವಿದ್ಯತ್, ಪವನ ವಿದ್ಯತ್, ಜಲ ವಿದ್ಯತ್ ಹಾಗೂ ಸೋಲಾರ ಬಳಕೆಯನ್ನು ಹೆಚ್ಚು ಹೆಚ್ಚು ಉಪಯೋಸಲು ಹಾಗೂ ಈ ಕುರಿತಾಗಿ ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರ್ಯಾಯ ವಿದ್ಯತ್ ಬಳಕೆಗೆ ಪ್ರೋತ್ಸಾಹಿಸಬೇಕು.
ಕಳೆದ 6 ತಿಂಗಳಿನಿAದ ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ವ್ಯಾಪಾರಸ್ಥರು, ಉದ್ದಿಮೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಉದ್ದಿಮೆಗಳು ಸಮಯಕ್ಕೆ ಸರಿಯಾಗಿ ಉತ್ಪನ್ನಗಳನ್ನು ಪೂರೈಸಿ ಮಾಡುವಲ್ಲಿ ಸಮಸ್ಯೆ ಎದುರಿಸುತ್ತದ್ದು. ಈಗ ಅವು ಬಂದ್ ಆಗುವ ಹಂತಕ್ಕೆ ಬಂದಿದೆ. ಇಂತಹ ಕ್ಲಿಷ್ಟಕರ ಪರಿಸ್ಥತಿಯಲ್ಲಿ ವಿದ್ಯತ್ ದರವನ್ನು ಹೆಚ್ಚಿಸಲು ಅಲೋಚನೆ ಮಾಡಿರುವುದು ನಿಜಕ್ಕೂ ಗ್ರಾಹಕರಿಗೆ, ವ್ಯಾಪಾರಸ್ಥರಿಗೆ ಹಾಗೂ ಉದ್ದಿಮೆದಾರದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಇರುವ ದರದಲ್ಲಿ ರಿಯಾಯಿತಿ ನೀಡಿ ಪ್ರೋತ್ಸಾಹಿಸಬೇಕೇ ಹೊರತು ಈ ಸಂದರ್ಭದಲ್ಲಿ ಕೆಇಆರ್ಸಿ ಯವರು ವಿದ್ಯತ್ ಸರಬರಾಜು ಕಂಪನಿಗಳ ವಿದ್ಯತ್ ದರ ಏರಿಕೆ ಬೇಡಿಕೆಯನ್ನು ಅಧರಿಸಿ ದರ ಏರಿಸುವುದು ಸಮಂಜಸವಲ್ಲ. ಈಗಿರುವ ವಿದ್ಯತ್ ದರವನ್ನೇ 22-23 ನೇ ಸಾಲಿನ ಮುಂದುವರೆಸಬೇಕೆAದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಆಗ್ರಹಿಸಿದ್ದಾರೆ.
Leave a Comment